ತಾಲ್ಲೂಕಿನ ಗೋನಾಳು ಗ್ರಾಮದಲ್ಲಿ ಮೇ 25ರಂದು ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ನಂತರ ಬಹುತೇಕ ರೈತರು ಗ್ರಾಮ ತೊರೆದಿದ್ದು, ಸಂಪೂರ್ಣ ನೀರಾವರಿ ಪ್ರದೇಶದಿಂದ ಆವೃತವಾದ ಈ ಭಾಗದಲ್ಲಿ ಇನ್ನೂ ಕೃಷಿ ಚಟುವಟಿಕೆಗಳು ಆರಂಭವಾಗಿಲ್ಲ. ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ರೈತ ಕೆ. ಸೋಮಪ್ಪ ಮತ್ತು ಕೂಲಿಕಾರ ಮಹಿಳೆ ಹರಿಜನ ಶಕುಂತಲಾ, ಹುಲಿಗೆಮ್ಮ, ಎಚ್. ಮಂಗಮ್ಮ ತಮ್ಮ ಮನದಾಳದ ನೋವನ್ನು ಹೊರ ಹಾಕಿದರು.