ತಾಲ್ಲೂಕು ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ರಾಜೇಂದ್ರ ಮಾತನಾಡಿ, ಕಾಲುಬಾಯಿ ರೋಗಕ್ಕೆ ಸಿಲುಕಿದ ರಾಸುಗಳಲ್ಲಿ ವಿಪರೀತ ಜ್ವರ ಕಾಣಿಸಿಕೊಳ್ಳಲಿದೆ. ನಾಲಿಗೆ ಮೇಲ್ಪದರ ಒಸಡುಗಳು ಒಡೆಯುವುದರಿಂದ ಮೇವು ತಿನ್ನಲು ಸಾಧ್ಯವಾಗುವುದಿಲ್ಲ. ಕಾಲಿನ ಗೊರಸು ಒಡೆದು ಹುಳುಗಳು ಬೀಳಲಿದೆ. ಇದರಿಂದ ರಾಸುಗಳು ನಡೆಯಲಾರದ ಪರಿಸ್ಥಿತಿಗೆ ತಲುಪಿ ನಿತ್ರಾಣಗೊಳ್ಳಲಿವೆ. ವಕಾಲುಬಾಯಿ ರೋಗ ಮಾರಣಾಂತಿಕವಾಗಿದ್ದು ರೋಗ ಪೀಡಿತ ರಾಸುಗಳು ಮೃತಪಡುವುದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತದೆ ಎಂದರು.