<p><strong>ತೂಬಗೆರೆ(ದೊಡ್ಡಬಳ್ಳಾಪುರ): </strong>ತಾಲ್ಲೂಕಿನ ತೂಬಗೆರೆ ಸರ್ಕಾರಿ ಪ್ರೌಢ ಶಾಲೆಯ 2001-02ನೇ ಸಾಲಿನ ಹಳೇಯ ವಿದ್ಯಾರ್ಥಿಗಳಿಂದ ಗುರುಗಳ ಪಾದಪೂಜೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.</p>.<p>ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ವಿಶ್ವನಾಥಗೌಡ, 2001-02ನೇ ಸಾಲಿನ ಹಳೇಯ ವಿದ್ಯಾರ್ಥಿಗಳು <strong>‘</strong>ನನ್ನ ಶಾಲೆ ನನ್ನ ಜವಾಬ್ದಾರಿ’ ಎಂಬ ಧ್ಯೇಯ ವಾಕ್ಯದೊಂದಿಗೆ ತಾವು ಓದಿದ ಸರ್ಕಾರಿ ಶಾಲೆಯ ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡಿ, ₹50 ಸಾವಿರ ಮೌಲ್ಯದ ಶಾಲಾ ಪರಿಕರಗಳನ್ನು ನೀಡಿ ತಮ್ಮ ನೆಚ್ಚಿನ ಗುರುಗಳನ್ನು 25 ವರ್ಷದ ನಂತರ ಭೇಟಿ ಮಾಡಿ ಅಭಿನಂದಿಸಿರುವ ಶ್ಲಾಘನೀಯ ಎಂದರು.</p>.<p>ವಿಜ್ಞಾನ ಶಿಕ್ಷಕಿ ಶೋಭಾ, ವಿಜ್ಞಾನವನ್ನು ಜನರ ಪ್ರಗತಿಗಷ್ಟೇ ಬಳಸಬೇಕು. ನಿತ್ಯ ಜೀವನವನ್ನು ಉತ್ತಮ ಪರಿಸರದೊಂದಿಗೆ ಜೀವನ ಕಳೆಯಬೇಕು. ಉತ್ತಮ ಆರೋಗ್ಯವನ್ನು ಕಾಪಾಡಲು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.</p>.<p>ಹಿರಿಯ ಕನ್ನಡ ಶಿಕ್ಷಕಿ ರೇಣುಕಾ ಭಟ್, ಇಂದಿರಾ, ಶೈಲಜಾ ಹಾಗೂ ನಿವೃತ್ತ ಹಿರಿಯ ಶಿಕ್ಷಕ ಅನಂತಪದ್ಮನಾಭಶರ್ಮಾ, ಎ.ಆರ್.ಸುಬ್ಬರಾವ್, ಸಿ.ಕೆ.ಕೃಷ್ಣಪ್ಪ,ನಾರಾಯಣಪ್ಪ, ಮಂಜುನಾಥ್, ಗುಮಾಸ್ತರಾದ ಭಾಗ್ಯಮ್ಮ, ಹಳೆಯ ವಿದ್ಯಾರ್ಥಿಗಳಾದ ನವೀನ್, ಸುಬ್ರಹ್ಮಣ್ಯ, ಸಂಪತ್, ವೆಂಕಟೇಶ್, ಗಂಗರಾಜು. ಎನ್.ಶಿವಕುಮಾರ್, ಮಮತಾ, ಚೈತ್ರ, ಪಾರ್ವತಿ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೂಬಗೆರೆ(ದೊಡ್ಡಬಳ್ಳಾಪುರ): </strong>ತಾಲ್ಲೂಕಿನ ತೂಬಗೆರೆ ಸರ್ಕಾರಿ ಪ್ರೌಢ ಶಾಲೆಯ 2001-02ನೇ ಸಾಲಿನ ಹಳೇಯ ವಿದ್ಯಾರ್ಥಿಗಳಿಂದ ಗುರುಗಳ ಪಾದಪೂಜೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.</p>.<p>ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ವಿಶ್ವನಾಥಗೌಡ, 2001-02ನೇ ಸಾಲಿನ ಹಳೇಯ ವಿದ್ಯಾರ್ಥಿಗಳು <strong>‘</strong>ನನ್ನ ಶಾಲೆ ನನ್ನ ಜವಾಬ್ದಾರಿ’ ಎಂಬ ಧ್ಯೇಯ ವಾಕ್ಯದೊಂದಿಗೆ ತಾವು ಓದಿದ ಸರ್ಕಾರಿ ಶಾಲೆಯ ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡಿ, ₹50 ಸಾವಿರ ಮೌಲ್ಯದ ಶಾಲಾ ಪರಿಕರಗಳನ್ನು ನೀಡಿ ತಮ್ಮ ನೆಚ್ಚಿನ ಗುರುಗಳನ್ನು 25 ವರ್ಷದ ನಂತರ ಭೇಟಿ ಮಾಡಿ ಅಭಿನಂದಿಸಿರುವ ಶ್ಲಾಘನೀಯ ಎಂದರು.</p>.<p>ವಿಜ್ಞಾನ ಶಿಕ್ಷಕಿ ಶೋಭಾ, ವಿಜ್ಞಾನವನ್ನು ಜನರ ಪ್ರಗತಿಗಷ್ಟೇ ಬಳಸಬೇಕು. ನಿತ್ಯ ಜೀವನವನ್ನು ಉತ್ತಮ ಪರಿಸರದೊಂದಿಗೆ ಜೀವನ ಕಳೆಯಬೇಕು. ಉತ್ತಮ ಆರೋಗ್ಯವನ್ನು ಕಾಪಾಡಲು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.</p>.<p>ಹಿರಿಯ ಕನ್ನಡ ಶಿಕ್ಷಕಿ ರೇಣುಕಾ ಭಟ್, ಇಂದಿರಾ, ಶೈಲಜಾ ಹಾಗೂ ನಿವೃತ್ತ ಹಿರಿಯ ಶಿಕ್ಷಕ ಅನಂತಪದ್ಮನಾಭಶರ್ಮಾ, ಎ.ಆರ್.ಸುಬ್ಬರಾವ್, ಸಿ.ಕೆ.ಕೃಷ್ಣಪ್ಪ,ನಾರಾಯಣಪ್ಪ, ಮಂಜುನಾಥ್, ಗುಮಾಸ್ತರಾದ ಭಾಗ್ಯಮ್ಮ, ಹಳೆಯ ವಿದ್ಯಾರ್ಥಿಗಳಾದ ನವೀನ್, ಸುಬ್ರಹ್ಮಣ್ಯ, ಸಂಪತ್, ವೆಂಕಟೇಶ್, ಗಂಗರಾಜು. ಎನ್.ಶಿವಕುಮಾರ್, ಮಮತಾ, ಚೈತ್ರ, ಪಾರ್ವತಿ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>