ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ ಮಾತನಾಡಿ, ‘ಪುರಸಭೆ ವ್ಯಾಪ್ತಿಯಲ್ಲಿ ಈ ಹಿಂದೆ ಪೌರ ಕಾರ್ಮಿಕರ ಸಂಖ್ಯೆಗಿಂತ ಶೇ 50ರಷ್ಟು ಖಾಲಿಯಾಗಿದ್ದಾರೆ ಸ್ವಚ್ಛತೆ ಎಂಬುದು ಕಾರ್ಮಿಕರಿಗೆ ಸವಾಲಾಗಿದೆ. ರೋಗ ಬರುವುದಕ್ಕಿಂತ ರೋಗ ಬಾರದಂತೆ ಮೊದಲು ಎಚ್ಚೆತ್ತುಕೊಳ್ಳುವುದು ಅತಿ ಮುಖ್ಯ ಅನೇಕರು ಪೌರ ಕಾರ್ಮಿಕರನ್ನು ಕೀಳು ಭಾವನೆಯಿಂದ ಕಾಣುತ್ತಾರೆ. ತಮ್ಮ ಮನೆಯನ್ನು ಶುಚಿಗೊಳಿಸಲು ಹಿಂಜರಿಯುವ ಮಂದಿ ಪ್ರತಿಯೊಂದಕ್ಕೂ ಪೌರ ಕಾರ್ಮಿಕರನ್ನು ಅವಲಂಬಿಸುತ್ತಾರೆ. ಇಡೀ ನಗರದಲ್ಲಿ ಸ್ಯಾನಿಟೈಸರ್, ಮಾಸ್ಕ್ ಮತ್ತು ಕೊಳೆಗೇರಿ ಪ್ರದೇಶಗಳಲ್ಲಿ ಪ್ರತಿನಿತ್ಯ 1,200 ಲೀಟರ್ ಉಚಿತ ಹಾಲು ವಿತರಿಸಲಾಗುತ್ತಿದೆ ನಾಗರಿಕರು ಕಸ ತ್ಯಾಜ್ಯ ವಿಲೇವಾರಿ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಸಹಕರಿಸಬೇಕು ಎಂದು ಹೇಳೀದರು.