ಮುಳಬಾಗಿಲು: ತಾಲ್ಲೂಕಿನ ಆವಣಿ ಗ್ರಾಮದ ಆವಣಿ ಶೃಂಗೇರಿ ಮಠದಲ್ಲಿ ಲೋಕ ಕಲ್ಯಾಣಕ್ಕಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ ನಿಂದ ಗುರುವಾರ ದತ್ತಾತ್ರೇಯ ಹೋಮ ನಡೆಯಿತು.
ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಪರಿಷತ್ನ ಮುಖ್ಯ ಸಲಹೆಗಾರ ವೆಂಕಟೇಶ್, ಸೂಲೂರು ಶಶಿಧರ ಶರ್ಮ, ಕೆಜಿಎಫ್ ಪ್ರಸನ್ನಕುಮಾರ್, ವಾಸುದೇವ್, ಚಂದ್ರಶೇಖರ್, ಹೊಳಲಿ ಪ್ರಕಾಶ್, ಎಂ.ಎನ್. ಹಳ್ಳಿ ಶ್ರೀನಿವಾಸ್ ಭಾಗವಹಿಸಿದ್ದರು.