<p>ಹೊಸಕೋಟೆ: ಜನರಲ್ಲಿನ ಭಕ್ತಿ ಭಾವ ಶ್ರದ್ಧೆಯಿಂದ ಕೂಡಿದ್ದಾಗ ಮಾತ್ರ ಸನ್ಮಾರ್ಗ ಪ್ರಾಪ್ತಿಯಾಗುತ್ತದೆ. ಆಚರಣೆ, ಜಾತ್ರೆ ಉತ್ಸವಗಳು ಇದರ ಭಾಗ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.</p>.<p>ತಾಲ್ಲೂಕಿನ ಅಪ್ಪಸಂದ್ರ ಗ್ರಾಮದಲ್ಲಿ ಕುರುಬ ಜನಾಂಗದ ಭತ್ತೇಶ್ವರ ದೊಡ್ಡ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದರು.</p>.<p>ಪ್ರತಿಯೊಬ್ಬರು ಪರಸ್ವರ ಪ್ರೀತಿ, ವಿಶ್ವಾಸ, ಗೌರವದಿಂದ ಎಲ್ಲರು ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು. ದೇವರಿಗೆ ಜಾತಿ, ಧರ್ಮ ಎಂಬುದಿಲ್ಲ. ತಮ್ಮ ಅಂತರಾಳದಲ್ಲಿನ ಮನಸ್ಸಿನಲ್ಲಿ ಕಾಣುವ ದೇವರ ನೋಟ ಸ್ವಚ್ಛತೆಯಿಂದ ಕೂಡಿರಬೇಕಷ್ಟೇ ಎಂದರು.</p>.<p>ಹಾಲುಮತ ಕುಲಗುರು ಶ್ರೀಗುರು ಸಿದ್ದಲಿಂಗಆರಾಧ್ಯ ಮಾತನಾಡಿ, ಮನಸ್ಸಿನ ದೇವರು ಸ್ವಚ್ಛವಾಗಿರಬೇಕು. ಮನದಲ್ಲಿ ಕಲ್ಮಶ ತುಂಬಿಕೊಂಡು ದೇವರು ಮುಂದೆ ಹೋಗಿ ಕೈ ಮುಗಿದರೇ ಏನು ಪ್ರಯೋಜನವಿಲ್ಲ ಎಂದರು.</p>.<p>ಕುರುಬರ ಸಮಾಜದವರು ಸುಮಾರು 12 ರಿಂದ 15 ಸಾವಿರ ಜನ ಸೇರಿದ್ದರು. ತಲೆ ಮೇಲೆ ತೆಂಗಿನಕಾಯಿ ಒಡೆಯುವುದು, ಡೋಳ್ಳು ಕುಣಿತ, ವೀರಗಾಸೆ, ಕಾಲಾಡಿ ಕುಣಿತ ಗಮನ ಸೆಳೆಯಿತು.</p>.<p>ಹೊಸದುರ್ಗ ಕನಕಗುರ ಪೀಠ ಶಾಖಾಮಠದ ಈಶ್ವರನಂದಪುರಿ ಸ್ವಾಮೀಜಿ, ಸಿ.ನಾಗರಾಜ್, ಬಸವೇಶ್ವರ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಎಸ್.ವಿ.ಮುನಿರಾಜು, ಕುಲಗೌಡ್ರು ಗೋವಿಂದರಾಜು, ಮುನಿರಾಜು ವೈ, ರಾಮಕೃಷ್ಣಪ್ಪ, ಪಟೇಲ್ ಬಾಬು, ಗೋವಿಂದರಾಜು, ಎಂ.ನಾರಾಯಣ ಸ್ವಾಮಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-15-1509779860</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸಕೋಟೆ: ಜನರಲ್ಲಿನ ಭಕ್ತಿ ಭಾವ ಶ್ರದ್ಧೆಯಿಂದ ಕೂಡಿದ್ದಾಗ ಮಾತ್ರ ಸನ್ಮಾರ್ಗ ಪ್ರಾಪ್ತಿಯಾಗುತ್ತದೆ. ಆಚರಣೆ, ಜಾತ್ರೆ ಉತ್ಸವಗಳು ಇದರ ಭಾಗ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.</p>.<p>ತಾಲ್ಲೂಕಿನ ಅಪ್ಪಸಂದ್ರ ಗ್ರಾಮದಲ್ಲಿ ಕುರುಬ ಜನಾಂಗದ ಭತ್ತೇಶ್ವರ ದೊಡ್ಡ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದರು.</p>.<p>ಪ್ರತಿಯೊಬ್ಬರು ಪರಸ್ವರ ಪ್ರೀತಿ, ವಿಶ್ವಾಸ, ಗೌರವದಿಂದ ಎಲ್ಲರು ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು. ದೇವರಿಗೆ ಜಾತಿ, ಧರ್ಮ ಎಂಬುದಿಲ್ಲ. ತಮ್ಮ ಅಂತರಾಳದಲ್ಲಿನ ಮನಸ್ಸಿನಲ್ಲಿ ಕಾಣುವ ದೇವರ ನೋಟ ಸ್ವಚ್ಛತೆಯಿಂದ ಕೂಡಿರಬೇಕಷ್ಟೇ ಎಂದರು.</p>.<p>ಹಾಲುಮತ ಕುಲಗುರು ಶ್ರೀಗುರು ಸಿದ್ದಲಿಂಗಆರಾಧ್ಯ ಮಾತನಾಡಿ, ಮನಸ್ಸಿನ ದೇವರು ಸ್ವಚ್ಛವಾಗಿರಬೇಕು. ಮನದಲ್ಲಿ ಕಲ್ಮಶ ತುಂಬಿಕೊಂಡು ದೇವರು ಮುಂದೆ ಹೋಗಿ ಕೈ ಮುಗಿದರೇ ಏನು ಪ್ರಯೋಜನವಿಲ್ಲ ಎಂದರು.</p>.<p>ಕುರುಬರ ಸಮಾಜದವರು ಸುಮಾರು 12 ರಿಂದ 15 ಸಾವಿರ ಜನ ಸೇರಿದ್ದರು. ತಲೆ ಮೇಲೆ ತೆಂಗಿನಕಾಯಿ ಒಡೆಯುವುದು, ಡೋಳ್ಳು ಕುಣಿತ, ವೀರಗಾಸೆ, ಕಾಲಾಡಿ ಕುಣಿತ ಗಮನ ಸೆಳೆಯಿತು.</p>.<p>ಹೊಸದುರ್ಗ ಕನಕಗುರ ಪೀಠ ಶಾಖಾಮಠದ ಈಶ್ವರನಂದಪುರಿ ಸ್ವಾಮೀಜಿ, ಸಿ.ನಾಗರಾಜ್, ಬಸವೇಶ್ವರ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಎಸ್.ವಿ.ಮುನಿರಾಜು, ಕುಲಗೌಡ್ರು ಗೋವಿಂದರಾಜು, ಮುನಿರಾಜು ವೈ, ರಾಮಕೃಷ್ಣಪ್ಪ, ಪಟೇಲ್ ಬಾಬು, ಗೋವಿಂದರಾಜು, ಎಂ.ನಾರಾಯಣ ಸ್ವಾಮಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-15-1509779860</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>