ಹೊಸಕೋಟೆ | ಜೆಜೆಎಂ ಮಾನದಂಡ ಗಾಳಿಗೆ: ಸಮಸ್ಯೆಗಳ ಸರಮಾಲೆ ಸೃಷ್ಟಿಸಿದ ಮನೆ ಗಂಗೆ!
ರವೀಶ್ ಜಿ.ಎನ್
Published : 29 ಏಪ್ರಿಲ್ 2026, 23:46 IST
Last Updated : 30 ಏಪ್ರಿಲ್ 2026, 5:24 IST
ADVERTISEMENT
ಫಾಲೋ ಮಾಡಿ
Comments
ನಳ ಅಳವಡಿಸಿ ವರ್ಷಗಳಾದವು. ಆದರೆ, ಇಂದಿಗೂ ಒಂದು ಹನಿ ನೀರು ಹರಿದಿಲ್ಲ. ಹಳೆ ಓವರ್ ಹೆಡ್ ಟ್ಯಾಂಕ್ ಮತ್ತು ಎರಡು ಹಳೆ ಕೊಳವೆ ಬಾವಿಗಳ ಮೂಲಕ ಮೀಟರ್ ಅಳವಡಿಸಲು ಮುಂದಾದಾಗ ಗ್ರಾಮಸ್ಥರು ವಿರೋಧಿಸಿದ್ದರಿಂದ ಕಾಮಗಾರಿ ನಿಂತಿದೆ. ಮಂಜುನಾಥ್, ಭಕ್ತರಹಳ್ಳಿ ನಿವಾಸಿ
ಮನೆ ಮನೆಗೆ ಗಂಗೆ ಕಾಮಗಾರಿಯಿಂದ ನಮ್ಮೂರಿಗೆ ದಿನಕ್ಕೆ 20 ನಿಮಿಷ ಮಾತ್ರ ನೀರು ಬರುತ್ತದೆ. ಅದು ಯಾವುದಕ್ಕೂ ಸಾಕಾಗುವುದಿಲ್ಲ. ಈ ಕಾಮಗಾರಿಗಿಂತ ಮೊದಲೇ ಚೆನ್ನಾಗಿ ನೀರು ಸಿಗುತ್ತಿತ್ತು.
ಹರೀಶ್, ಹಳೇಊರು ಗ್ರಾಮ, ನಂದಗುಡಿ ಹೋಬಳಿ
ಜಲ ಜೀವನ್ ಮಿಷನ್ ಅಡಿ ನಮ್ಮೂರಿಗೆ ಒಂದು ವರ್ಷದ ಹಿಂದೆ ಕೊಳವೆ ಬಾವಿ ಕೊರೆಸಿ ಮೋಟರ್ ಅಳವಡಿಸಿದ್ದಾರೆ. ಆದರೆ, ಒಂದು ವರ್ಷದಿಂದ ಪೈಪ್ಲೈನ್ ಸಂಪರ್ಕ ಮಾಡದೆ ನಿರ್ಲಕ್ಷಿಸಲಾಗಿದೆ. ಹಾಗಾದರೆ ಮನೆಗೆ ಗಂಗೆ ಹೇಗೆ ಹರಿಯುತ್ತದೆ