ದೊಡ್ಡಗಟ್ಟಿಗನಬ್ಬೆ ರಸ್ತೆಯಲ್ಲಿ ವಾಹನ ಸವಾರರ ಪರದಾಟ
ದೊಡ್ಡಗಟ್ಟಿಗನಬ್ಬೆ ರಸ್ತೆಯಲ್ಲಿ ಜಿಎಸ್ಐಟಿಐ ಕಾಲೇಜಿನವರೆಗೂ ವಿದ್ಯುತ್ ಬೀದಿ ದೀಪ ಇಲ್ಲ
ಕೆಇಬಿ ಸರ್ಕಲ್ ಬಳಿ ದೊಡ್ಡಗಟ್ಟಿಗನಬ್ಬೆ ಕೆಡೆ ಇರುವ ತಿರುವು ಬಳಿ ಅಪಘಾತಕ್ಕೆ ಆಹ್ವಾನ ನಿಡುವ ಚರಂಡಿ
ದೊಡ್ಡಗಟ್ಟಿಗನಬ್ಬೆ ರಸ್ತೆಯಲ್ಲಿ ಚರಂಡಿ ದುಸ್ಥಿತಿ ಮತ್ತು ಪಾದಚಾರಿ ಮಾರ್ಗವಿಲ್ಲದಿರುವುದು

ನಗರದ ಕೆಇಬಿ ವೃತ್ತದಿಂದ ರಾಜ ಆರ್ಟ್ಸ್ ವರೆಗೆ ವಾಹನ ದಟ್ಟಣೆ ಇರುತ್ತದೆ. ಈ ಭಾಗದಲ್ಲಿ ಏನಾದರೂ ಅಪಘಾತ ಆಗಿದ್ದರೆ ಅಲ್ಲಿಗೆ ವೇಗವಾಗಿ ತೆರಳಲು ಆಗಲ್ಲ. ಒಮ್ಮೆ ಪೆತ್ತನಹಳ್ಳಿ ಬಳಿ ಅಪಘಾತ ಸ್ಥಳಕ್ಕೆ ಹೋಗಲು ಪರದಾಡಬೇಕಾಯಿತು.
ಅಮರ್ ಆಂಬುಲೆನ್ಸ್ ಚಾಲಕ
ದೊಡ್ಡಗಟ್ಟಿಗನಬ್ಬೆ ರಸ್ತೆಗೆ ಹೊಂದಿಕೊಂಡಂತೆ 10ಕ್ಕೂ ಹೆಚ್ಚು ಶಾಲಾ ಕಾಲೇಜುಗಳಿವೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುವುದರಿಂದ ರಸ್ತೆ ದಾಟಲು ಭಯ ಆಗುತ್ತದೆ
ಸಿ. ದರ್ಶನ್ ವಿದ್ಯಾರ್ಥಿ
ನಿತ್ಯ ಭಾರಿ ಬೃಹತ್ ಟ್ರಕ್ ಕಂಟೈನರ್ ಓಡಾಡುವುದರಿಂದ ಅವು ತೆರಳುವವರೆಗೂ ನಾವು ಹಿಂದಿನನಿಂದ ನಿಧಾನಗತಿಯಲ್ಲೇ ಸಂಚರಿಸಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ವಿನಯ್ ಬೈಕ್ ಸವಾರ ಒಂದು ಪಾಯಿಂಟ್ಗೆ ₹50 ಇದೆ. ಕೆಇಬಿ ಸರ್ಕಲ್ನಿಂದ ನಂದಶ್ರಿ ಕಲ್ಯಾಣ ಮಂಟಪದ ವೆರೆಗೆ ವಾಹನ ದಟ್ಟಣೆ ಉಂಟಾದರೆ ಕೇವಲ ಒಂದು ಕೀ.ಮೀ. ಹಾದಿ ಸಾಗಲು ಒಂದು ಗಂಟೆ ಬೇಕಾಗುತ್ತದೆ. ಒಂದು ಸಣ್ಣ ಸವಾರಿಗೆ ಒಂದು ತಾಸು ಹಿಡಿದರೆ ನಿರೀಕ್ಷಿತ ಸಂಪಾದನೆ ಆಗುವುದಿಲ್ಲ.
ಎಚ್.ಎನ್.ಮುನಿರಾಜು ಆಟೊ ಚಾಲಕ
ದೊಡ್ಡಗಟ್ಟಿಗನಬ್ಬೆ ರಸ್ತೆಯಲ್ಲಿ ಪಾದಚಾರಿ ಮಾರ್ಗ ಸಮರ್ಪಕ ವಿದ್ಯುತ್ ದೀಪ ಚರಂಡಿ ಇಲ್ಲ. ವಿಪರೀತ ವಾಹನಗಳ ಓಡಾಡ ಬೇರೆ. ಇದರಿಂದ ಅಲ್ಲಿ ಭಯದಿಂದ ಓಡಾಡಬೇಕಿದೆ.
ಸುನಿಲ್ ಪಾದಚಾರಿ