ವಿಜಯಪುರ: ಬೆಂಗಳೂರು- ಬಾಗೇಪಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಆವತಿ ಭುಕ್ತಿ ಪ್ಯಾಮಿಲಿ ರೆಸ್ಟೋರೆಂಟ್ನಲ್ಲಿ ಊಟ ಮಾಡುವಾಗ ₹ 50 ಸಾವಿರ ಬಿಟ್ಟುಹೋಗಿದ್ದ ಗ್ರಾಹಕರಿಗೆ ಹಣವನ್ನು ಮತ್ತೆ ವಾಪಸ್ ನೀಡುವ ಮೂಲಕ ರೆಸ್ಟೋರೆಂಟ್ ಸಿಬ್ಬಂದಿ ಮಾನವೀಯತೆಮೆರೆದಿದ್ದಾರೆ.
ಹಿಂದೂಪುರದ ಗೌತಮ್ ಎಂಬುವರು ರೆಸ್ಟೋರೆಂಟ್ನಲ್ಲಿ ಊಟ ಮಾಡಿ, ಅಲ್ಲಿಯೇ ಹಣ ಬಿಟ್ಟು ಹೋಗಿದ್ದರು.
‘ನಾವು ಕೆಲಸದ ನಿಮಿತ್ತ ಬೆಂಗಳೂರಿಗೆ ಪ್ರಯಾಣ ಮಾಡುತ್ತಿರುತ್ತೇನೆ. ಪ್ರಯಾಣದ ನಡುವೆ ಅ. 19ರಂದು ಇಲ್ಲಿ ಊಟ ಮುಗಿಸಿಕೊಂಡು ಹೋಗುವಾಗ ಹಣ ಬಿಟ್ಟುಹೋಗಿದ್ದೆ. ಹೋಟೆಲ್ನವರಿಗೆ ದೂರವಾಣಿ ಕರೆ ಮಾಡಿದಾಗ ವಾಪಸ್ ನೀಡಿದ್ದಾರೆ’ ಎಂದು ಗೌತಮ್ ತಿಳಿಸಿದರು.