<p>ಹೊಸಕೋಟೆ: ನಗರದ ಸಿಐಟಿಯು ಕಚೇರಿ ಬಳಿ ತಾಲ್ಲೂಕಿನ ಕಾರ್ಮಿಕರು ಮತ್ತು ದುಡಿಯುವ ವರ್ಗ ಸೇರಿ ವಿಶ್ವ ಕಾರ್ಮಿಕರ ದಿನ ಆಚರಿಸಿದವು. ಕೆಂಪು ಧ್ವಜ ಹಾರಿಸಿ ತಾಲ್ಲೂಕು ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಮೂರ್ತಿಗೆ ಹೂ ಮಾಲೆ ಹಾಕಲಾಯಿತು.</p>.<p>ಕೇಂದ್ರ ಮತ್ತು ರಾಜ್ಯ ಸರ್ಕಾರ ದೇಶದ ಬೆನ್ನೆಲುಬಾಗಿ ದುಡಿಯುವ ಕಾರ್ಮಿಕರ ವಿರೋಧಿ ಶಾಸನಗಳನ್ನು ಜಾರಿಗೆ ತರುತ್ತಿವೆ ಎಂದು ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.</p>.<p>ಸಿಐಟಿಯುನ ತಾಲ್ಲೂಕು ಕಾರ್ಯದರ್ಶಿ ಮೋಹನ್ ಬಾಬು, ‘ಕಾರ್ಮಿಕರನ್ನು ಕೋಟ್ಯಧಿಪತಿಯಾಗಿ ಮಾಡಿ ಎಂದು ಯಾವ ಸರ್ಕಾರವನ್ನು ಕೇಳುತ್ತಿಲ್ಲ. ಘನತೆಯಿಂದ ಕಾರ್ಮಿಕ ವರ್ಗ ಮತ್ತು ಅವರ ಕುಟುಂಬ ಬದುಕವ ಕನಿಷ್ಠ ಸೌಲಭ್ಯ ಕಲ್ಪಿಸಿ ಎಂದು ಕೇಳುತ್ತಿದ್ದೇವೆ’ ಎಂದರು.</p>.<p>ಕಾರ್ಮಿಕರು ಯಂತ್ರಗಳಲ್ಲ, ಮನುಷ್ಯರು. ಎಷ್ಟು ಗಂಟೆ ಬೇಕದರೂ ಕೆಲಸ ಮಾಡಲು ಆಗದು. ನಿರಂತರ ಒತ್ತಡದಲ್ಲಿ ಕೆಲಸ ಮಾಡಿದರೆ ಆಗುವ ಮಾನಸಿಕ ಮತ್ತು ದೈಹಿಕ ಧಣಿವು ಸರ್ಕಾರಕ್ಕೆ ಗೊತ್ತಿಲ್ಲವೇ?, 8 ಗಂಟೆ ಕೆಲಸದ ಅವಧಿಯನ್ನು ಬದಲಿಸಿ ಮತ್ತೆ ನಮ್ಮನ್ನು ಪುನಃ ಬ್ರಿಟಿಷರ ಕಾಲದಲ್ಲಿ ಕಾರ್ಮಿಕರು ಅನುಭವಿಸುತ್ತಿದ್ದ ಸ್ಥಿತಿಗೆ ತಳ್ಳುವ ಹುನ್ನಾರವನ್ನು ಸರ್ಕಾರ ಮತ್ತು ಬಂಡವಾಳ ಶಾಹಿಗಳು ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಹರಿಂದ್ರ, ಕಾರ್ಮಿಕರ ಶ್ರಮ ಎಂದರೆ ಕೇವಲ ಅವರ ಬೆವರಲ್ಲ, ಅದು ಅವರ ರಕ್ತದ ಶ್ರಮ ಎಂಬುದರ ಸಂಕೇತವಾಗಿ ಹೋರಾಟಕ್ಕೆ ಕೆಂಪು ಭಾವುಟವನ್ನು ಬಳಸಲಾಗುತ್ತಿದೆ. ಆದ್ದರಿಂದ ದೇಶದ ಪ್ರಗತಿಗೆ ಬೆವರು ಮತ್ತು ರಕ್ತವನ್ನು ಸವೇಸುತ್ತಿರುವ ಕಾರ್ಮಿಕರಿಗೆ ಈ ದೇಶದ ಸರ್ಕಾರಗಳು ಕೊಡುವ ಗೌರವ ಎಂತದ್ದು ಎಂದು ಪ್ರಶ್ನಿಸಬೇಕಿದೆ ಎಂದರು.</p>.<p>ಸಿಐಟಿಯು ತಾಲ್ಲೂಕು ಖಜಾಂಚಿ ವೆಂಕಟರಾಜು, ಮುನಿರಾಜು, ಕಾರ್ಮಿಕರು,ಸಂಘ ಮುಖಂಡರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260503-15-722934026</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸಕೋಟೆ: ನಗರದ ಸಿಐಟಿಯು ಕಚೇರಿ ಬಳಿ ತಾಲ್ಲೂಕಿನ ಕಾರ್ಮಿಕರು ಮತ್ತು ದುಡಿಯುವ ವರ್ಗ ಸೇರಿ ವಿಶ್ವ ಕಾರ್ಮಿಕರ ದಿನ ಆಚರಿಸಿದವು. ಕೆಂಪು ಧ್ವಜ ಹಾರಿಸಿ ತಾಲ್ಲೂಕು ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಮೂರ್ತಿಗೆ ಹೂ ಮಾಲೆ ಹಾಕಲಾಯಿತು.</p>.<p>ಕೇಂದ್ರ ಮತ್ತು ರಾಜ್ಯ ಸರ್ಕಾರ ದೇಶದ ಬೆನ್ನೆಲುಬಾಗಿ ದುಡಿಯುವ ಕಾರ್ಮಿಕರ ವಿರೋಧಿ ಶಾಸನಗಳನ್ನು ಜಾರಿಗೆ ತರುತ್ತಿವೆ ಎಂದು ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.</p>.<p>ಸಿಐಟಿಯುನ ತಾಲ್ಲೂಕು ಕಾರ್ಯದರ್ಶಿ ಮೋಹನ್ ಬಾಬು, ‘ಕಾರ್ಮಿಕರನ್ನು ಕೋಟ್ಯಧಿಪತಿಯಾಗಿ ಮಾಡಿ ಎಂದು ಯಾವ ಸರ್ಕಾರವನ್ನು ಕೇಳುತ್ತಿಲ್ಲ. ಘನತೆಯಿಂದ ಕಾರ್ಮಿಕ ವರ್ಗ ಮತ್ತು ಅವರ ಕುಟುಂಬ ಬದುಕವ ಕನಿಷ್ಠ ಸೌಲಭ್ಯ ಕಲ್ಪಿಸಿ ಎಂದು ಕೇಳುತ್ತಿದ್ದೇವೆ’ ಎಂದರು.</p>.<p>ಕಾರ್ಮಿಕರು ಯಂತ್ರಗಳಲ್ಲ, ಮನುಷ್ಯರು. ಎಷ್ಟು ಗಂಟೆ ಬೇಕದರೂ ಕೆಲಸ ಮಾಡಲು ಆಗದು. ನಿರಂತರ ಒತ್ತಡದಲ್ಲಿ ಕೆಲಸ ಮಾಡಿದರೆ ಆಗುವ ಮಾನಸಿಕ ಮತ್ತು ದೈಹಿಕ ಧಣಿವು ಸರ್ಕಾರಕ್ಕೆ ಗೊತ್ತಿಲ್ಲವೇ?, 8 ಗಂಟೆ ಕೆಲಸದ ಅವಧಿಯನ್ನು ಬದಲಿಸಿ ಮತ್ತೆ ನಮ್ಮನ್ನು ಪುನಃ ಬ್ರಿಟಿಷರ ಕಾಲದಲ್ಲಿ ಕಾರ್ಮಿಕರು ಅನುಭವಿಸುತ್ತಿದ್ದ ಸ್ಥಿತಿಗೆ ತಳ್ಳುವ ಹುನ್ನಾರವನ್ನು ಸರ್ಕಾರ ಮತ್ತು ಬಂಡವಾಳ ಶಾಹಿಗಳು ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಹರಿಂದ್ರ, ಕಾರ್ಮಿಕರ ಶ್ರಮ ಎಂದರೆ ಕೇವಲ ಅವರ ಬೆವರಲ್ಲ, ಅದು ಅವರ ರಕ್ತದ ಶ್ರಮ ಎಂಬುದರ ಸಂಕೇತವಾಗಿ ಹೋರಾಟಕ್ಕೆ ಕೆಂಪು ಭಾವುಟವನ್ನು ಬಳಸಲಾಗುತ್ತಿದೆ. ಆದ್ದರಿಂದ ದೇಶದ ಪ್ರಗತಿಗೆ ಬೆವರು ಮತ್ತು ರಕ್ತವನ್ನು ಸವೇಸುತ್ತಿರುವ ಕಾರ್ಮಿಕರಿಗೆ ಈ ದೇಶದ ಸರ್ಕಾರಗಳು ಕೊಡುವ ಗೌರವ ಎಂತದ್ದು ಎಂದು ಪ್ರಶ್ನಿಸಬೇಕಿದೆ ಎಂದರು.</p>.<p>ಸಿಐಟಿಯು ತಾಲ್ಲೂಕು ಖಜಾಂಚಿ ವೆಂಕಟರಾಜು, ಮುನಿರಾಜು, ಕಾರ್ಮಿಕರು,ಸಂಘ ಮುಖಂಡರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260503-15-722934026</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>