<p><strong>ಆನೇಕಲ್: </strong>ತಾಲ್ಲೂಕಿನ ಹುಸ್ಕೂರು ಮದ್ದೂರಮ್ಮ ಜಾತ್ರಾ ಮಹೋತ್ಸವ ಮಾರ್ಚ್ 13ರಿಂದ 17ರವರೆಗೆ ನಡೆಯಲಿದೆ. ವೈಭವದ ಜಾತ್ರೆಗೆ ಹುಸ್ಕೂರು ಗ್ರಾಮ ಸಜ್ಜಾಗಿದೆ.</p>.<p>ಮಾರ್ಚ್ 14 ರಂದು ದೇವಾಲಯದ ಆವರಣಕ್ಕೆ ಆಗಮಿಸುವ ತೇರುಗಳನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲ ಗ್ರಾಮಗಳು ಹಾಗೂ ನೆರೆ ರಾಜ್ಯಗಳ ಸಹಸ್ರಾರು ಮಂದಿ ಆಗಮಿಸಲಿದ್ದಾರೆ. 3-5 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು ಹುಸ್ಕೂರು ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.</p>.<p>ಜಾತ್ರೆಯ ಅಂಗವಾಗಿ ಶುಕ್ರವಾರ ಗ್ರಾಮದಲ್ಲಿ ದೀಪದಾರತಿ ನಡೆಯಿತು. ಗಟ್ಟಹಳ್ಳಿ, ಆವಲಹಳ್ಳಿ, ಗೂಳಿಮಂಗಲ, ಚಿಂತಲಮಡಿವಾಳ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳ ಮಹಿಳೆಯರು ತಂಬಿಟ್ಟು ಆರತಿಯನ್ನು ಹೂವುಗಳಿಂದ ವಿಶೇಷವಾಗಿ ಸಿಂಗರಿಸಿ ಹುಸ್ಕೂರು ಮದ್ದೂರಮ್ಮ ದೇವಾಲಯಕ್ಕೆ ಬಂದು ದೇವಿಗೆ ಆರತಿ ಸಲ್ಲಿಸಿದರು.</p>.<p>ತಮಟೆ ವಾದ್ಯದೊಂದಿಗೆ ಗ್ರಾಮಗಳಿಂದ ಮಹಿಳೆಯರು ಮಲ್ಲಿಗೆ ಹೂವುಗಳಿಂದ ಅಲಂಕೃತ ದೀಪಗಳನ್ನು ಹೊತ್ತು ದೇವಾಲಯದೆಡೆಗೆ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಗಟ್ಟಹಳ್ಳಿಯಿಂದ 200ಕ್ಕೂ ಹೆಚ್ಚು ಮಹಿಳೆಯರು ಏಕಕಾಲದಲ್ಲಿ ಕರಗದ ಮಾದರಿಯ ಮಲ್ಲಿಗೆ ಹೂವುಗಳ ಅಲಂಕೃತ ದೀಪಗಳನ್ನು ಹೊತ್ತು ಸಂಜೆ 6ರ ವೇಳೆಗೆ ದೇವಾಲಯದ ಬಳಿಗೆ ಆಗಮಿಸಿ ದೇವಿಗೆ ಸಮರ್ಪಿಸಿದರು. ಯುವಕರು ತಮಟೆಯ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.</p>.<p>ಹುಸ್ಕೂರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಾರ್ಚ್ 14ರಂದು 17 ಗ್ರಾಮಗಳ ಕುರ್ಜುಗಳು ಹುಸ್ಕೂರು ಮದ್ದೂರಮ್ಮ ದೇವಿ ದೇವಾಲಯದ ಬಳಿ ಜಮಾವಣೆಗೊಳ್ಳಲಿವೆ. ಮಾರ್ಚ್ 15ರಂದು ಮಕ್ಕಳ ಸಿಡಿ ಆಯೋಜಿಸಲಾಗಿದೆ. ರಾತ್ರಿ 1ಕ್ಕೆ ಧರ್ಮರಾಯ ದ್ರೌಪದಮ್ಮ ದೇವಿ ಕರಗ ಶಕ್ತೋತ್ಸವ ಆಯೋಜಿಸಲಾಗಿದೆ ಎಂದು ದೇವಾಲಯದ ಸಮಿತಿ ಅಧ್ಯಕ್ಷ ಹುಸ್ಕೂರು ಕೆ.ಪಾಪಣ್ಣ ತಿಳಿಸಿದರು.</p>.<p>ಬೆಂಗಳೂರಿನಿಂದ ಕೇವಲ 15ಕಿ.ಮೀ. ದೂರದಲ್ಲಿರುವ ಆನೇಕಲ್ ತಾಲ್ಲೂಕಿನ ಹುಸ್ಕೂರು ಗ್ರಾಮದಲ್ಲಿ ನಡೆಯುವ ಮದ್ದೂರಮ್ಮ ಜಾತ್ರೆ ಗ್ರಾಮೀಣ ಸೊಗಡಿನದ್ದಾಗಿದ್ದು ತೇರು ಬರುವ ಪ್ರತಿ ಗ್ರಾಮದ ಜನರು ಒಗ್ಗೂಡಿ ಜಾತ್ರೆ ಆಚರಿಸುವುದು ವಿಶೇಷವಾಗಿದೆ. ತಿಂಗಳಿಗೂ ಹೆಚ್ಚು ಕಾಲ ಈ ತೇರುಗಳನ್ನು ಸಿದ್ದಪಡಿಸಲು ಗ್ರಾಮಸ್ಥರು, ಗ್ರಾಮದ ಯುವಕರು ಶ್ರಮ ವಹಿಸಿರುತ್ತಾರೆ.</p>.<p>ಈ ಹಿಂದೆ ತೇರುಗಳನ್ನು 150-200 ಅಡಿಗಳವರೆ ಕಟ್ಟಲಾಗಿತ್ತು. ಈ ಬಾರಿ ಕುರ್ಜುಗಳ ಎತ್ತರವನ್ನು 80ಅಡಿಗೆ ಸೀಮಿತಗೊಳಿಸಿದ್ದು ಎಲ್ಲ 17 ಗ್ರಾಮಗಳ ಕುರ್ಜುಗಳು 80 ಅಡಿಗಳೊಳಗೆ ಕುರ್ಜನ್ನು ಕಟ್ಟಿದ್ದಾರೆ. ಕುರ್ಜುಗಳು 15–20ಅಂತಸ್ತುಗಳಿರುತ್ತವೆ. ಈ ತೇರುಗಳನ್ನು ಎತ್ತುಗಳಿಂದ ಎಳೆಸುವುದು ಜಾತ್ರೆಯ ಮತ್ತೊಂದು ವಿಶೇಷ. 50 ರಿಂದ 60 ಜತೆ ಎತ್ತುಗಳು ಜಾತ್ರೆಯ ದಿನ ತೇರನ್ನು ಎಳೆದುಕೊಂಡು ಹುಸ್ಕೂರಿಗೆ ಬರುವುದನ್ನು ನೋಡುವುದೇ ಒಂದು ಆನಂದ. ಹಳ್ಳ ದಿಣ್ಣೆಗಳೆನ್ನದೇ ಹೊಲ ಗದ್ದೆಗಳಲ್ಲಿ ಸಾಗುತ್ತಾ ಬರುವ ಸನ್ನಿವೇಶ ಅದ್ಭುತವೇ ಸರಿ.</p>.<p><strong>ದೇವಾಲಯದ ಹಿನ್ನೆಲೆ: </strong>ಹುಸ್ಕೂರು ಮದ್ದೂರಮ್ಮ ದೇವಾಲಯವು 11ನೇ ಶತಮಾನದ್ದು ಎನ್ನಲಾಗಿದೆ. ಹೈದರಾಲಿ, ಟಿಪ್ಪುಸುಲ್ತಾನ್ ಈ ದೇವಾಲಯದ ಭಕ್ತರಾಗಿದ್ದರು ಎಂಬುದಕ್ಕೆ ಟಿಪ್ಪುಸುಲ್ತಾನ್ ನೀಡಿರುವ ಚಿನ್ನದ ಆಭರಣಗಳು ಸಾಕ್ಷಿಯಾಗಿವೆ.</p>.<p>ಒಮ್ಮೆ ಟಿಪ್ಪುಸುಲ್ತಾನ್ ಸೈನಿಕರ ಜತೆ ಹುಸ್ಕೂರು ಮದ್ದೂರಮ್ಮ ದೇವಾಲಯದ ಬಳಿ ತಂಗಿದ್ದರು. ಊಟ ಮಾಡಿವ ನಂತರ ಎಲ್ಲರೂ ವಾಂತಿ ಮಾಡಲು ಆರಂಭಿಸಿದರು. ಯಾವ ಔಷಧಕ್ಕೂ ವಾಂತಿ ನಿಲ್ಲಲಿಲ್ಲ. ಆಗ ಮದ್ದೂರಮ್ಮ ದೇವಿಯಲ್ಲಿ ಹರಕೆ ಹೊತ್ತುಕೊಂಡಾಗ ವಾಂತಿ ನಿಂತಿತು ಎಂಬ ಪ್ರತೀತಿ. ಅಂದಿನಿಂದ ಟಿಪ್ಪುಸುಲ್ತಾನ್ ಮದ್ದೂರಮ್ಮ ದೇವಿಯ ಭಕ್ತನಾದ. ನಂತರ ದೇವಿಗೆ ಚಿನ್ನದ ಹಾಗೂ ವಜ್ರದ ಆಭರಣ ಮಾಡಿಸಿಕೊಟ್ಟ. ಆಭರಣಗಳನ್ನು ಭದ್ರತೆಯ ದೃಷ್ಟಿಯಿಂದ ತಾಲ್ಲೂಕಿನ ಖಜಾನೆಯಲ್ಲಿ ಇಡಲಾಗಿದೆ.</p>.<p><strong>ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ : </strong>ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಡಿವೈಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್ಗಳು ಸೇರಿದಂತೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಾತ್ರೆಯನ್ನು ಯಶಸ್ವಿಗೊಳಿಸಲು ಕ್ರಮ ವಹಿಸಲಾಗುವುದು ಎಂದು ಡಿಸಿಪಿ ನಾರಾಯಣ್ ತಿಳಿಸಿದರು.</p>.<p>ವೃದ್ಧರು, ಮಹಿಳೆಯರು ತಮ್ಮ ಆಭರಣಗಳ ಬಗ್ಗೆ ನಿಗಾ ವಹಿಸಬೇಕು. ಜಿಲ್ಲಾಧಿಕಾರಿ ನೀಡಿದ ಸೂಚನೆಗಳನ್ನು ಗ್ರಾಮಗಳು ಕಡ್ಡಾಯವಾಗಿ ಪಾಲಿಸಬೇಕು. ಪಾರ್ಕಿಂಗ್ ನಿಯಮಗಳನ್ನು ಪಾಲಿಸಬೇಕು. ಪುಟ್ಟ ಮಕ್ಕಳ ಬಗ್ಗೆ ಪೋಷಕರು ನಿಗಾ ವಹಿಸಬೇಕು ಎಂದರು.</p>.<p>ವೈಭವದ ಜಾತ್ರೆಗೆ ರೈಲ್ವೇ ವಿದ್ಯುತ್ತೀಕರಣ ಅಡ್ಡ ನೂರಾರು ವರ್ಷಗಳ ಇತಿಹಾಸವುಳ್ಳ ಹುಸ್ಕೂರು ಮದ್ದೂರಮ್ಮ ಜಾತ್ರೆಯ ವೈಭವಕ್ಕೆ ಆಧುನಿಕತೆಯ ರೈಲ್ವೇ ಮಾರ್ಗ ವಿದ್ಯುತ್ತೀಕರಣ ಅಡ್ಡಿಯಾಗಿದ್ದು ಗತವೈಭವ ಮಂಕಾಗಿದೆ. 11 ತೇರುಗಳು ಹುಸ್ಕೂರು ಮದ್ದೂರಮ್ಮ ದೇವಿ ದೇವಾಲಯದ ಆವರಣಕ್ಕೆ ಬರುತ್ತವೆ. ಇನ್ನುಳಿದ 6 ತೇರುಗಳು ಚಿಂತಲಮಡಿವಾಳದ ಬಳಿ ನಿಲ್ಲುತ್ತವೆ. ದೊಡ್ಡನಾಗಮಂಗಲ ರಾಮಸಾಗರ ಸಿಂಗೇನಅಗ್ರಹಾರ ರಾಯಸಂದ್ರ ಹೀಲಲಿಗೆ ಲಕ್ಷ್ಮಿನಾರಾಯಣಪುರ ಸಂಜೀವನಗರ ಗಟ್ಟಹಳ್ಳಿ ಗೂಳಿಮಂಗಲ ಕೋನಪ್ಪನ ಅಗ್ರಹಾರ ಗೋವಿಂದ ಶೆಟ್ಟಿಪಾಳ್ಯದ ಕುರ್ಜುಗಳು ದೇವಾಲಯದ ಬಳಿಗೆ ಬರಲಿವೆ. ಇನ್ನುಳಿದಂತೆ ನಾರಾಯಣಘಟ್ಟ ಕಗ್ಗಲಿಪುರ ಹಾರೋಹಳ್ಳಿ ಕೊಡತಿ ಚೊಕ್ಕಸಂದ್ರ ಸೂಲಿಕುಂಟೆ ಗ್ರಾಮಗಳ ಕುರ್ಜುಗಳು ಹುಸ್ಕೂರು ರೈಲ್ವೇ ನಿಲ್ದಾಣದ ಬಳಿ ನಿಲುಗಡೆಯಾಗಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: </strong>ತಾಲ್ಲೂಕಿನ ಹುಸ್ಕೂರು ಮದ್ದೂರಮ್ಮ ಜಾತ್ರಾ ಮಹೋತ್ಸವ ಮಾರ್ಚ್ 13ರಿಂದ 17ರವರೆಗೆ ನಡೆಯಲಿದೆ. ವೈಭವದ ಜಾತ್ರೆಗೆ ಹುಸ್ಕೂರು ಗ್ರಾಮ ಸಜ್ಜಾಗಿದೆ.</p>.<p>ಮಾರ್ಚ್ 14 ರಂದು ದೇವಾಲಯದ ಆವರಣಕ್ಕೆ ಆಗಮಿಸುವ ತೇರುಗಳನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲ ಗ್ರಾಮಗಳು ಹಾಗೂ ನೆರೆ ರಾಜ್ಯಗಳ ಸಹಸ್ರಾರು ಮಂದಿ ಆಗಮಿಸಲಿದ್ದಾರೆ. 3-5 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು ಹುಸ್ಕೂರು ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.</p>.<p>ಜಾತ್ರೆಯ ಅಂಗವಾಗಿ ಶುಕ್ರವಾರ ಗ್ರಾಮದಲ್ಲಿ ದೀಪದಾರತಿ ನಡೆಯಿತು. ಗಟ್ಟಹಳ್ಳಿ, ಆವಲಹಳ್ಳಿ, ಗೂಳಿಮಂಗಲ, ಚಿಂತಲಮಡಿವಾಳ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳ ಮಹಿಳೆಯರು ತಂಬಿಟ್ಟು ಆರತಿಯನ್ನು ಹೂವುಗಳಿಂದ ವಿಶೇಷವಾಗಿ ಸಿಂಗರಿಸಿ ಹುಸ್ಕೂರು ಮದ್ದೂರಮ್ಮ ದೇವಾಲಯಕ್ಕೆ ಬಂದು ದೇವಿಗೆ ಆರತಿ ಸಲ್ಲಿಸಿದರು.</p>.<p>ತಮಟೆ ವಾದ್ಯದೊಂದಿಗೆ ಗ್ರಾಮಗಳಿಂದ ಮಹಿಳೆಯರು ಮಲ್ಲಿಗೆ ಹೂವುಗಳಿಂದ ಅಲಂಕೃತ ದೀಪಗಳನ್ನು ಹೊತ್ತು ದೇವಾಲಯದೆಡೆಗೆ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಗಟ್ಟಹಳ್ಳಿಯಿಂದ 200ಕ್ಕೂ ಹೆಚ್ಚು ಮಹಿಳೆಯರು ಏಕಕಾಲದಲ್ಲಿ ಕರಗದ ಮಾದರಿಯ ಮಲ್ಲಿಗೆ ಹೂವುಗಳ ಅಲಂಕೃತ ದೀಪಗಳನ್ನು ಹೊತ್ತು ಸಂಜೆ 6ರ ವೇಳೆಗೆ ದೇವಾಲಯದ ಬಳಿಗೆ ಆಗಮಿಸಿ ದೇವಿಗೆ ಸಮರ್ಪಿಸಿದರು. ಯುವಕರು ತಮಟೆಯ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.</p>.<p>ಹುಸ್ಕೂರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಾರ್ಚ್ 14ರಂದು 17 ಗ್ರಾಮಗಳ ಕುರ್ಜುಗಳು ಹುಸ್ಕೂರು ಮದ್ದೂರಮ್ಮ ದೇವಿ ದೇವಾಲಯದ ಬಳಿ ಜಮಾವಣೆಗೊಳ್ಳಲಿವೆ. ಮಾರ್ಚ್ 15ರಂದು ಮಕ್ಕಳ ಸಿಡಿ ಆಯೋಜಿಸಲಾಗಿದೆ. ರಾತ್ರಿ 1ಕ್ಕೆ ಧರ್ಮರಾಯ ದ್ರೌಪದಮ್ಮ ದೇವಿ ಕರಗ ಶಕ್ತೋತ್ಸವ ಆಯೋಜಿಸಲಾಗಿದೆ ಎಂದು ದೇವಾಲಯದ ಸಮಿತಿ ಅಧ್ಯಕ್ಷ ಹುಸ್ಕೂರು ಕೆ.ಪಾಪಣ್ಣ ತಿಳಿಸಿದರು.</p>.<p>ಬೆಂಗಳೂರಿನಿಂದ ಕೇವಲ 15ಕಿ.ಮೀ. ದೂರದಲ್ಲಿರುವ ಆನೇಕಲ್ ತಾಲ್ಲೂಕಿನ ಹುಸ್ಕೂರು ಗ್ರಾಮದಲ್ಲಿ ನಡೆಯುವ ಮದ್ದೂರಮ್ಮ ಜಾತ್ರೆ ಗ್ರಾಮೀಣ ಸೊಗಡಿನದ್ದಾಗಿದ್ದು ತೇರು ಬರುವ ಪ್ರತಿ ಗ್ರಾಮದ ಜನರು ಒಗ್ಗೂಡಿ ಜಾತ್ರೆ ಆಚರಿಸುವುದು ವಿಶೇಷವಾಗಿದೆ. ತಿಂಗಳಿಗೂ ಹೆಚ್ಚು ಕಾಲ ಈ ತೇರುಗಳನ್ನು ಸಿದ್ದಪಡಿಸಲು ಗ್ರಾಮಸ್ಥರು, ಗ್ರಾಮದ ಯುವಕರು ಶ್ರಮ ವಹಿಸಿರುತ್ತಾರೆ.</p>.<p>ಈ ಹಿಂದೆ ತೇರುಗಳನ್ನು 150-200 ಅಡಿಗಳವರೆ ಕಟ್ಟಲಾಗಿತ್ತು. ಈ ಬಾರಿ ಕುರ್ಜುಗಳ ಎತ್ತರವನ್ನು 80ಅಡಿಗೆ ಸೀಮಿತಗೊಳಿಸಿದ್ದು ಎಲ್ಲ 17 ಗ್ರಾಮಗಳ ಕುರ್ಜುಗಳು 80 ಅಡಿಗಳೊಳಗೆ ಕುರ್ಜನ್ನು ಕಟ್ಟಿದ್ದಾರೆ. ಕುರ್ಜುಗಳು 15–20ಅಂತಸ್ತುಗಳಿರುತ್ತವೆ. ಈ ತೇರುಗಳನ್ನು ಎತ್ತುಗಳಿಂದ ಎಳೆಸುವುದು ಜಾತ್ರೆಯ ಮತ್ತೊಂದು ವಿಶೇಷ. 50 ರಿಂದ 60 ಜತೆ ಎತ್ತುಗಳು ಜಾತ್ರೆಯ ದಿನ ತೇರನ್ನು ಎಳೆದುಕೊಂಡು ಹುಸ್ಕೂರಿಗೆ ಬರುವುದನ್ನು ನೋಡುವುದೇ ಒಂದು ಆನಂದ. ಹಳ್ಳ ದಿಣ್ಣೆಗಳೆನ್ನದೇ ಹೊಲ ಗದ್ದೆಗಳಲ್ಲಿ ಸಾಗುತ್ತಾ ಬರುವ ಸನ್ನಿವೇಶ ಅದ್ಭುತವೇ ಸರಿ.</p>.<p><strong>ದೇವಾಲಯದ ಹಿನ್ನೆಲೆ: </strong>ಹುಸ್ಕೂರು ಮದ್ದೂರಮ್ಮ ದೇವಾಲಯವು 11ನೇ ಶತಮಾನದ್ದು ಎನ್ನಲಾಗಿದೆ. ಹೈದರಾಲಿ, ಟಿಪ್ಪುಸುಲ್ತಾನ್ ಈ ದೇವಾಲಯದ ಭಕ್ತರಾಗಿದ್ದರು ಎಂಬುದಕ್ಕೆ ಟಿಪ್ಪುಸುಲ್ತಾನ್ ನೀಡಿರುವ ಚಿನ್ನದ ಆಭರಣಗಳು ಸಾಕ್ಷಿಯಾಗಿವೆ.</p>.<p>ಒಮ್ಮೆ ಟಿಪ್ಪುಸುಲ್ತಾನ್ ಸೈನಿಕರ ಜತೆ ಹುಸ್ಕೂರು ಮದ್ದೂರಮ್ಮ ದೇವಾಲಯದ ಬಳಿ ತಂಗಿದ್ದರು. ಊಟ ಮಾಡಿವ ನಂತರ ಎಲ್ಲರೂ ವಾಂತಿ ಮಾಡಲು ಆರಂಭಿಸಿದರು. ಯಾವ ಔಷಧಕ್ಕೂ ವಾಂತಿ ನಿಲ್ಲಲಿಲ್ಲ. ಆಗ ಮದ್ದೂರಮ್ಮ ದೇವಿಯಲ್ಲಿ ಹರಕೆ ಹೊತ್ತುಕೊಂಡಾಗ ವಾಂತಿ ನಿಂತಿತು ಎಂಬ ಪ್ರತೀತಿ. ಅಂದಿನಿಂದ ಟಿಪ್ಪುಸುಲ್ತಾನ್ ಮದ್ದೂರಮ್ಮ ದೇವಿಯ ಭಕ್ತನಾದ. ನಂತರ ದೇವಿಗೆ ಚಿನ್ನದ ಹಾಗೂ ವಜ್ರದ ಆಭರಣ ಮಾಡಿಸಿಕೊಟ್ಟ. ಆಭರಣಗಳನ್ನು ಭದ್ರತೆಯ ದೃಷ್ಟಿಯಿಂದ ತಾಲ್ಲೂಕಿನ ಖಜಾನೆಯಲ್ಲಿ ಇಡಲಾಗಿದೆ.</p>.<p><strong>ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ : </strong>ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಡಿವೈಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್ಗಳು ಸೇರಿದಂತೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಾತ್ರೆಯನ್ನು ಯಶಸ್ವಿಗೊಳಿಸಲು ಕ್ರಮ ವಹಿಸಲಾಗುವುದು ಎಂದು ಡಿಸಿಪಿ ನಾರಾಯಣ್ ತಿಳಿಸಿದರು.</p>.<p>ವೃದ್ಧರು, ಮಹಿಳೆಯರು ತಮ್ಮ ಆಭರಣಗಳ ಬಗ್ಗೆ ನಿಗಾ ವಹಿಸಬೇಕು. ಜಿಲ್ಲಾಧಿಕಾರಿ ನೀಡಿದ ಸೂಚನೆಗಳನ್ನು ಗ್ರಾಮಗಳು ಕಡ್ಡಾಯವಾಗಿ ಪಾಲಿಸಬೇಕು. ಪಾರ್ಕಿಂಗ್ ನಿಯಮಗಳನ್ನು ಪಾಲಿಸಬೇಕು. ಪುಟ್ಟ ಮಕ್ಕಳ ಬಗ್ಗೆ ಪೋಷಕರು ನಿಗಾ ವಹಿಸಬೇಕು ಎಂದರು.</p>.<p>ವೈಭವದ ಜಾತ್ರೆಗೆ ರೈಲ್ವೇ ವಿದ್ಯುತ್ತೀಕರಣ ಅಡ್ಡ ನೂರಾರು ವರ್ಷಗಳ ಇತಿಹಾಸವುಳ್ಳ ಹುಸ್ಕೂರು ಮದ್ದೂರಮ್ಮ ಜಾತ್ರೆಯ ವೈಭವಕ್ಕೆ ಆಧುನಿಕತೆಯ ರೈಲ್ವೇ ಮಾರ್ಗ ವಿದ್ಯುತ್ತೀಕರಣ ಅಡ್ಡಿಯಾಗಿದ್ದು ಗತವೈಭವ ಮಂಕಾಗಿದೆ. 11 ತೇರುಗಳು ಹುಸ್ಕೂರು ಮದ್ದೂರಮ್ಮ ದೇವಿ ದೇವಾಲಯದ ಆವರಣಕ್ಕೆ ಬರುತ್ತವೆ. ಇನ್ನುಳಿದ 6 ತೇರುಗಳು ಚಿಂತಲಮಡಿವಾಳದ ಬಳಿ ನಿಲ್ಲುತ್ತವೆ. ದೊಡ್ಡನಾಗಮಂಗಲ ರಾಮಸಾಗರ ಸಿಂಗೇನಅಗ್ರಹಾರ ರಾಯಸಂದ್ರ ಹೀಲಲಿಗೆ ಲಕ್ಷ್ಮಿನಾರಾಯಣಪುರ ಸಂಜೀವನಗರ ಗಟ್ಟಹಳ್ಳಿ ಗೂಳಿಮಂಗಲ ಕೋನಪ್ಪನ ಅಗ್ರಹಾರ ಗೋವಿಂದ ಶೆಟ್ಟಿಪಾಳ್ಯದ ಕುರ್ಜುಗಳು ದೇವಾಲಯದ ಬಳಿಗೆ ಬರಲಿವೆ. ಇನ್ನುಳಿದಂತೆ ನಾರಾಯಣಘಟ್ಟ ಕಗ್ಗಲಿಪುರ ಹಾರೋಹಳ್ಳಿ ಕೊಡತಿ ಚೊಕ್ಕಸಂದ್ರ ಸೂಲಿಕುಂಟೆ ಗ್ರಾಮಗಳ ಕುರ್ಜುಗಳು ಹುಸ್ಕೂರು ರೈಲ್ವೇ ನಿಲ್ದಾಣದ ಬಳಿ ನಿಲುಗಡೆಯಾಗಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>