<p><strong>ಹೆಬ್ಬಗೋಡಿ</strong>(<strong>ಆನೇಕಲ್): </strong>ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುವ ವಿವಿಧ ಗ್ರಾಮಗಳ ತೇರುಗಳು ಒಂದೆಡೆ ನಿಂತಿದ್ದು ನೋಡುಗರ ಮನಸೂರೆಗೊಳ್ಳುತ್ತಿವೆ.</p>.<p>ಶನಿವಾರ ರಾತ್ರಿ 9ಕ್ಕೆ 11 ಗ್ರಾಮಗಳ ಕುರ್ಜುಗಳು ಹುಸ್ಕೂರು ಮದ್ದೂರಮ್ಮ ದೇವಾಲಯದ ಆವರಣ ತಲುಪಿದವು. ಉಳಿದ 6 ಕುರ್ಜುಗಳು ಹುಸ್ಕೂರು ರೈಲ್ವೆ ಹಳಿ ಬಳಿ ಜಮಾವಣೆಗೊಂಡವು. ರೈಲ್ವೆ ಹಳಿಯ ಬಳಿಯು ಮದ್ದೂರಮ್ಮ ಉತ್ಸವ ಮೂರ್ತಿ ಕುಳ್ಳರಿಸಿ ಪೂಜೆ ಸಲ್ಲಿಸಲಾಯಿತು. </p>.<p>ಭಾನುವಾರ ರಜೆ ದಿನವಾಗಿದ್ದರಿಂದ ಹುಸ್ಕೂರಿನಲ್ಲಿ ಭಕ್ತರ ದಂಡು ನೆರದಿತ್ತು. ಮದ್ದೂರಮ್ಮ ದೇವಾಲಯದ ಆವರಣದಲ್ಲಿ ನಿಲ್ಲಿಸಲಾಗಿದ್ದ 11 ಗ್ರಾಮಗಳ ಕುರ್ಜು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಮುಗಿಬಿದ್ದಿದ್ದರು. ತೇರಿನ ಮುಂಭಾಗ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡರು. ಡ್ರೋನ್ಗಳಲ್ಲಿ ಫೋಟೋ, ವಿಡಿಯೊ ಮಾಡವಲ್ಲಿ ಯುವಕರು ತೊಡಗಿದ್ದರು. </p>.<p>ದೇವಾಲಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯ ಜರುಗಿದವು. ಭಕ್ತರು ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಮಕ್ಕಳ ಶಿಡಿ ನಡೆಯಿತು. ಮಕ್ಕಳಿಗೆ ಉತ್ತಮ ಆರೋಗ್ಯ ದೊರೆಯುವಂತಾಗಲಿ ಎಂಬ ಉದ್ದೇಶದಿಂದ ಮಕ್ಕಳ ಶಿಡಿ ಆಚರಿಸಲಾಗುತ್ತದೆ.</p>.<p>ವಿದ್ಯುತ್ ದೀಪಗಳಿಂದ ಝಗಮಗಿಸುವ ಅಲಂಕೃತ ಕುರ್ಜುಗಳನ್ನು ರಾತ್ರಿ ವೇಳೆ ನೋಡುವುದೇ ಕಣ್ಣಿಗೆ ಹಬ್ಬ. ಕುರ್ಜುಗಳನ್ನು ವೀಕ್ಷಿಸಲು ಬಂದವರಲ್ಲಿ ಉತ್ತರ ಭಾರತೀಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೆಬ್ಬಗೋಡಿ</strong>(<strong>ಆನೇಕಲ್): </strong>ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುವ ವಿವಿಧ ಗ್ರಾಮಗಳ ತೇರುಗಳು ಒಂದೆಡೆ ನಿಂತಿದ್ದು ನೋಡುಗರ ಮನಸೂರೆಗೊಳ್ಳುತ್ತಿವೆ.</p>.<p>ಶನಿವಾರ ರಾತ್ರಿ 9ಕ್ಕೆ 11 ಗ್ರಾಮಗಳ ಕುರ್ಜುಗಳು ಹುಸ್ಕೂರು ಮದ್ದೂರಮ್ಮ ದೇವಾಲಯದ ಆವರಣ ತಲುಪಿದವು. ಉಳಿದ 6 ಕುರ್ಜುಗಳು ಹುಸ್ಕೂರು ರೈಲ್ವೆ ಹಳಿ ಬಳಿ ಜಮಾವಣೆಗೊಂಡವು. ರೈಲ್ವೆ ಹಳಿಯ ಬಳಿಯು ಮದ್ದೂರಮ್ಮ ಉತ್ಸವ ಮೂರ್ತಿ ಕುಳ್ಳರಿಸಿ ಪೂಜೆ ಸಲ್ಲಿಸಲಾಯಿತು. </p>.<p>ಭಾನುವಾರ ರಜೆ ದಿನವಾಗಿದ್ದರಿಂದ ಹುಸ್ಕೂರಿನಲ್ಲಿ ಭಕ್ತರ ದಂಡು ನೆರದಿತ್ತು. ಮದ್ದೂರಮ್ಮ ದೇವಾಲಯದ ಆವರಣದಲ್ಲಿ ನಿಲ್ಲಿಸಲಾಗಿದ್ದ 11 ಗ್ರಾಮಗಳ ಕುರ್ಜು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಮುಗಿಬಿದ್ದಿದ್ದರು. ತೇರಿನ ಮುಂಭಾಗ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡರು. ಡ್ರೋನ್ಗಳಲ್ಲಿ ಫೋಟೋ, ವಿಡಿಯೊ ಮಾಡವಲ್ಲಿ ಯುವಕರು ತೊಡಗಿದ್ದರು. </p>.<p>ದೇವಾಲಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯ ಜರುಗಿದವು. ಭಕ್ತರು ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಮಕ್ಕಳ ಶಿಡಿ ನಡೆಯಿತು. ಮಕ್ಕಳಿಗೆ ಉತ್ತಮ ಆರೋಗ್ಯ ದೊರೆಯುವಂತಾಗಲಿ ಎಂಬ ಉದ್ದೇಶದಿಂದ ಮಕ್ಕಳ ಶಿಡಿ ಆಚರಿಸಲಾಗುತ್ತದೆ.</p>.<p>ವಿದ್ಯುತ್ ದೀಪಗಳಿಂದ ಝಗಮಗಿಸುವ ಅಲಂಕೃತ ಕುರ್ಜುಗಳನ್ನು ರಾತ್ರಿ ವೇಳೆ ನೋಡುವುದೇ ಕಣ್ಣಿಗೆ ಹಬ್ಬ. ಕುರ್ಜುಗಳನ್ನು ವೀಕ್ಷಿಸಲು ಬಂದವರಲ್ಲಿ ಉತ್ತರ ಭಾರತೀಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>