ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ’ಸ್ಲಂ ಬೋರ್ಡ್ನಿಂದ 5 ಮನೆ ಮಂಜೂರು ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದೇನೆ. ಇಲ್ಲಿ ಭೂಮಿಯ ಲಭ್ಯತೆಯು ಕಡಿಮೆಯಿದೆ. ಆದ್ದರಿಂದ ಎಲ್ಲರಿಗೂ ನಿವೇಶನ ಮಂಜೂರು ಮಾಡಲಿಕ್ಕೆ ಸಾಧ್ಯವಿಲ್ಲ. ಆದ್ದರಿಂದ ಭೂಮಿಯನ್ನು ಖರೀದಿಸಿ ಮನೆಗಳನ್ನು ನಿರ್ಮಿಸುವಂತಹ ಕಾರ್ಯ ಮಾಡುತ್ತೇವೆ‘ ಎಂದರು.
’ಈಗಾಗಲೇ ಸ್ಲಂ ಬೋರ್ಡ್ನಿಂದ ನಿವೇಶನ ರಹಿತ ಫಲಾನುಭವಿಗಳ ಸಮೀಕ್ಷಾ ಕಾರ್ಯ ನಡೆಯುತ್ತಿದೆ. ಒಂದು ವೇಳೆ ಸರ್ಕಾರ ಭೂಮಿ ಖರೀದಿಸದಿದ್ದರೆ ಸ್ವಂತ ಖರ್ಚಿನಲ್ಲಿ ಭೂಮಿ ಖರೀದಿಸಿ ಮನೆಗಳನ್ನು ನಿರ್ಮಿಸಿ ಬಡವರಿಗೆ ಹಂಚಿಕೆ ಮಾಡುತ್ತೇನೆ‘ ಎಂದರು
’ಜನರು ಪುರಸಭೆಗೆ ಕಟ್ಟಬೇಕಾಗಿರುವ ತೆರಿಗೆ ಹಣ ಕಟ್ಟಬೇಕು. ಒಂದು ಕಾಲದಲ್ಲಿ ಬೇರೆ ಪುರಸಭೆಗಳಿಗೆ ಸಾಲ ಕೊಡುತ್ತಿದ್ದ ವಿಜಯಪುರ ಪುರಸಭೆ ಇಂದು ದಿವಾಳಿಯಾಗುತ್ತಿದೆ. ಆದ್ದರಿಂದ ಮೊದಲಿನ ಸ್ಥಿತಿಗೆ ತರಬೇಕಾಗಿದೆ. ರಾಜ್ಯದಲ್ಲಿನ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದು ಎಂದಿಗೂ ಸಾಧ್ಯವಾಗುವುದಿಲ್ಲ‘ ಎಂದರು.
ತಹಶೀಲ್ದಾರ್ ರಾಜಣ್ಣ, ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ಕೆ.ಪಿ.ಸಿ.ಸಿ. ಕಾರ್ಯದರ್ಶಿ ವಿ.ಮಂಜುನಾಥ್, ಸದಸ್ಯರಾದ ಎಸ್.ಭಾಸ್ಕರ್, ಎಂ.ಸತೀಶ್ ಕುಮಾರ್, ಅನಸೂಯಮ್ಮ, ಮುನಿಚಿನ್ನಪ್ಪ, ಮುಬಾರಕ್, ಮಹೇಶ್ ಕುಮಾರ್, ಎಂ.ನಾಗರಾಜ್, ಮುಖಂಡ ಹನೀಪುಲ್ಲಾ, ತಿರುಮಲೇಶ್, ಮುಖಂಡರು ಇದ್ದರು.