ಗ್ರಾಮದಲ್ಲಿ ವೀರಣ್ಣಸ್ವಾಮಿ ದೇಗುಲದಲ್ಲಿ ಹೊಸ ವಿಗ್ರಹ ಪ್ರತಿಷ್ಠಾಪನೆ ವಿಚಾರದಲ್ಲಿ ಒಕ್ಕಲಿಗ ಹಾಗೂ ನಾಯಕ ಸಮುದಾಯದ ನಡುವೆ ಕೆಲ ವರ್ಷಗಳಿಂದ ಜಟಾಪಟಿ ನಡೆದಿತ್ತು. ಮೂಲ ವಿಗ್ರಹ ಇರುವ ದೇಗುಲದಲ್ಲಿ ಹೊಸ ವಿಗ್ರಹ ಪ್ರತಿಷ್ಠಾಪನೆಗೆ ಅವಕಾಶ ನೀಡುವುದಿಲ್ಲ ಎಂದು ಒಂದು ಬಣ ಪಟ್ಟುಹಿಡಿದಿತ್ತು. ಹೊಸದಾಗಿ ವಿಗ್ರಹ ಮಾಡಿಸಿದ್ದ ನಾಯಕ ಸಮುದಾಯದವರು, ರಮೇಶ್ ಅವರ ಮನೆಯಲ್ಲೇ ವಿಗ್ರಹ ಇಟ್ಟು ಪೂಜಾ ಕಾರ್ಯಕ್ರಮ ನಡೆಸಿದ್ದರು.