ಇತ್ತೀಚೆಗಷ್ಟೇ ನಿಧನರಾದ ತಾಲ್ಲೂಕಿನ ಬಮೂಲ್ ಮಾಜಿ ನಿರ್ದೇಶಕ ಎನ್. ಹನುಮಂತೇಗೌಡ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಜಯರಾಂ, ಟಿಎಪಿಸಿಎಂಎಸ್ ಅಧ್ಯಕ್ಷ ಡಿ. ಸಿದ್ದರಾಮಣ್ಣ, ಕಾಂಗ್ರೆಸ್ ಮುಖಂಡರಾದ ತಿ. ರಂಗರಾಜು, ಬಿ.ಎಚ್. ಕೆಂಪಣ್ಣ, ಬಮೂಲ್ ಪ್ರಧಾನ ವ್ಯವಸ್ಥಾಪಕ ಬಿ.ಕೆ. ಜಗದೀಶ್, ವ್ಯವಸ್ಥಾಪಕ ಮಾಯಣ್ಣ, ಬಮೂಲ್ ಕಲ್ಯಾಣ ನಿಧಿ ಟ್ರಸ್ಟ್ ಸಿಇಒ ಡಾ.ಪ್ರಸನ್ನಕುಮಾರ್, ದೊಡ್ಡಬಳ್ಳಾಪುರ ಹಾಲು ಶಿಥಲೀಕರಣ ಕೇಂದ್ರದ ವ್ಯವಸ್ಥಾಪಕ ಡಾ.ಗೋಪಾಲಕೃಷ್ಣ ಹಾಜರಿದ್ದರು.