ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ. ಪ್ರಸಾದ್ ಮಾತನಾಡಿ, ಸನ್ಸೇರಾ ಪ್ರತಿಷ್ಠಾನ, ಮಹೇಂದ್ರ ಸಿಐ, ಸ್ಟೂಂಪ್ ಶೂಲೆ ಸೋಮಪ್ಪ ಲಿಮಿಟೆಡ್, ಸುಪ್ರಜಿತ್ ಕಂಪನಿಗಳು ಸಿಎಸ್ಆರ್ ಅಡಿಯಲ್ಲಿ ಬೊಮ್ಮಸಂದ್ರ ಕೈಗಾರಿಕಾ ಸಂಘದ ಜೊತೆಗೂಡಿ ಕೊರೊನಾ ಸಂದರ್ಭದಲ್ಲಿ ರಾಜ್ಯದ ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಿಗೆ ನೀಡುವ ಸಲುವಾಗಿ 330 ಆಮ್ಲಜನಕದ ಕಾನ್ಸನ್ಟ್ರೇಟರ್ಗಳು ಮತ್ತು 220 ಬೈಪ್ಯಾಕ್ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.