‘ಕೃಷಿ ಪದ್ಧತಿಯಲ್ಲಿ ನವಯಂತ್ರೋಪಕರಣ, ವೈಜ್ಞಾನಿಕ ಮೈಕ್ರೋನ್ಯೂಟ್ರಿಷನ್ ತಂತ್ರಾಂಶಗಳ ಅಳವಡಿಕೆ, ಋತುಮಾನಕ್ಕೆ ಅನುಗುಣವಾಗಿ ಬಿತ್ತನೆ ಬೀಜ, ತರಕಾರಿ ಬೆಳೆ ಕುರಿತು ಭಿತ್ತಿಪತ್ರಗಳು, ಕರಪತ್ರಗಳ ಮೂಲಕ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಸಕಾಲದಲ್ಲಿ ಅರ್ಹ ಫಲಾನುಭವಿ ರೈತರಿಗೆ ಸೌಲಭ್ಯ ಒದಗಿಸುವ ಮೂಲಕ ಅನುದಾನ ಸದ್ಬಳಕೆಗೆ ಆದ್ಯತೆ ನೀಡಬೇಕು’ ಎಂದು ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.