ಮಾಗಡಿ: ’ದುಡಿಮೆಗೆ ತಕ್ಕ ಗೌರವ ಇಲ್ಲದ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗುವುದಾಗಿ‘ ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.’ಎರಡೂವರೆ ವರ್ಷದಿಂದ ಜೆಡಿಎಸ್ನಲ್ಲಿ ನನಗೆ ಗೌರವ ನೀಡಲಿಲ್ಲ. ಪುರಸಭೆಯಲ್ಲಿ ಜೆಡಿಎಸ್ ಗೆ ಬಹುಮತವಿದ್ದರೂ ಶಾಸಕ ಮಂಜುನಾಥ್, ಬಿಜೆಪಿ ಅಧ್ಯಕ್ಷ ಸ್ಥಾನ ಪಡೆಯಲು ಸಹಕಾರ ನೀಡಿದರು. 2018ರ ಚುನಾವಣೆಯಲ್ಲಿ ಎಚ್.ಸಿ.ಬಾಲಕೃಷ್ಣ ಅವರನ್ನು ಸೋಲಿಸುವಂತೆ ದೇವೇಗೌಡ ಅವರು ಮನವಿ ಮಾಡಿದ್ದರು. ಮಾಗಡಿ ಕ್ಷೇತ್ರವನ್ನು ಕೆಂಪೇಗೌಡರ ಕಾಲದ ಆಡಳಿತ ಮರಳಿ ಪಡೆಯಲು ಡಿ.19ರಂದು ಬಿಜೆಪಿ ಗೆ ಸೇರ್ಪಡೆಯಾಗುತ್ತಿದ್ದೇನೆ’ ಎಂದರು.