ದೇವನಹಳ್ಳಿ: ಇಲ್ಲಿನ ಐತಿಹಾಸಿಕ ಪಾರಿವಾಳ ಗುಡ್ಡದ ಶ್ರೀಆಂಜನೇಯಸ್ವಾಮಿ 65ನೇ ವರ್ಷದ ಕಡಲೆಕಾಯಿ ಪರಿಷೆಯು ಡಿ. 14ರಂದು ನಡೆಯಲಿದೆ.
ಕಡೆಕಾರ್ತಿಕ ಸೋಮವಾರದ ಪ್ರಯುಕ್ತ ಗವಿ ವೀರಭದ್ರಸ್ವಾಮಿ, ಬೀರೇಶ್ವರಸ್ವಾಮಿ ಹಾಗೂ ಭಕ್ತ ಕನಕದಾಸರ ಪ್ರತಿಮೆಗಳಿಗೆ ವಿಶೇಷ ಅಲಂಕಾರ, ದೀಪದರ್ಶನ ನಡೆಯಲಿದೆ. ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ರದ್ದುಗೊಳಿಸಲಾಗಿದೆ. ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಪಾಲ್ಗೊಳ್ಳಬೇಕಿದೆ.