ಕೇರಳದ ವಿಥುರಾದಲ್ಲಿ ಹಬ್ಬದ ನಿಮಿತ್ತ ಕಾಳಿ ದೇವಿಗೆ ಭಕ್ತಾದಿಗಳಿಂದ ಸಂಗ್ರಹಿಸಿದ ರಕ್ತದ ಅಭಿಷೇಕ ನಡೆಸುವುದಾಗಿ ಆ ದೇವಾಲಯದ ಆಡಳಿತ ಮಂಡಳಿ ನಿರ್ಧರಿಸಿರುವುದು ವರದಿಯಾಗಿದೆ.
ಇದೊಂದು ಅವೈಚಾರಿಕ, ಅನೈತಿಕ, ಅನಾರುಂಡತನದ ಕೆಲಸವಾಗಿದೆ. ರಕ್ತದ ಅಭಿಷೇಕ ಬಯಸುವದು ಅದೆಂಥ ದೇವರು? 21ನೇ ಶತಮಾನದ ಇಂದಿನ ವೈಜ್ಞಾನಿಕ– ವೈಚಾರಿಕ ಯುಗದಲ್ಲೂ ಇಂಥ ಆಚರಣೆ ಬೇಕೇ? ಇದು ಅನಾಗರಿಕ ಹಾಗೂ ಮೌಢ್ಯದ ಪರಮಾವಧಿ. ಅದರ ಬದಲು ರಕ್ತದ ಕೊರತೆಯಿಂದ ಬಳಲುವ ರೋಗಿಗಳಿಗೆ, ಅಪಘಾತಗಳಿಗೆ ಈಡಾದವರ ರಕ್ಷಣೆಗೆ ರಕ್ತದಾನ ಮಾಡಲಿ.