‘ಆದಾಯ ತೆರಿಗೆ ಸೇರಿದಂತೆ ನಾವು ಪಾವತಿ ಮಾಡುವ ಹಲವು ತೆರಿಗೆಗಳು ದೇಶದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ನಿಗಧಿತ ಗಡುವಿನ ಒಳಗೆ ತೆರಿಗೆ ರಿಟರ್ನ್ ಸಲ್ಲಿಕೆ ಮಾಡದಿದ್ದರೆ, ತೆರಿಗೆ ವೆಚ್ಚದ ಮೇಲೆ ಬಡ್ಡಿ ವಿಧಿಸುವ ಅವಕಾಶವಿದೆ. ಅದೇ ರೀತಿ ಟಿಡಿಎಸ್ ಇತ್ಯಾದಿಗಳ ಮರುಪಾವತಿಗೆ ಇರುವ ನಿಬಂಧನೆಗಳನ್ನು ರಿಟರ್ನ್ ಸಲ್ಲಿಕೆಯ ಮೊದಲೇ ಅರಿತಿರಬೇಕು’ ಎಂದರು.