ವಿಜಯಪುರ:ಬಯಲುಸೀಮೆ ಜನರು ನೀರಾವರಿ ಸೌಲಭ್ಯವಿದ್ದಾಗ ಕೃಷಿ, ತೋಟಗಾರಿಕೆಯಲ್ಲಿ ತೊಡಗಿಸಿಕೊಂಡು ಹಾಲು, ಹಣ್ಣು, ತರಕಾರಿಗಳನ್ನು ಯಥೇಚ್ಛವಾಗಿ ಬೆಳೆಯುತ್ತಿದ್ದರು. ಆದರೆ, ಕೊಳವೆಬಾವಿಯಲ್ಲಿ ಅಂತರ್ಜಲ ಮಟ್ಟ 1,500 ಅಡಿಗೆ ಕುಸಿಯುತ್ತಿದ್ದಂತೆ ಬಹುತೇಕ ರೈತರು, ಕೃಷಿ, ತೋಟಗಾರಿಕಾ ಬೆಳೆಗಳನ್ನು ಕೈಬಿಟ್ಟು ರೇಷ್ಮೆ ಉದ್ಯಮದತ್ತ ಮುಖ ಮಾಡಿದ್ದಾರೆ.