ನಗರದ ಹೃದಯ ಭಾಗದಲ್ಲಿ ಮುತ್ತೂರು ಕೆರೆ ಇದೆ. ವಿಸ್ತೀರ್ಣದಲ್ಲಿ 19 ಎಕರೆಯಷ್ಟು ಇದ್ದು ಅತ್ಯಂತ ಆಯಕಟ್ಟಿನ ಸ್ಥಳದಲ್ಲಿದೆ. ರೈಲ್ವೆ ನಿಲ್ದಾಣಕ್ಕೆ ಸಮೀಪದಲ್ಲೇ ಇರುವ ಈ ಕೆರೆಯಲ್ಲಿ ಇಡೀ ವರ್ಷ ನೀರು ನಿಂತಿರುತ್ತಿತ್ತು. ಈ ಭಾಗದ ಕೊಳವೆ ಬಾವಿಗಳಲ್ಲಿ ನೀರು ಸಮೃದ್ಧವಾಗಿ ಇದ್ದ ಕಾಲವೊಂದಿತ್ತು. ಕುಡಿಯುವ ನೀರಿಗೆ ಬವಣೆಯೇ ಇರಲಿಲ್ಲ. ಆದರೆ, ಕೆರೆ ಸುತ್ತಲೂ ಬಡಾವಣೆಗಳು ತಲೆಯೆತ್ತಿ ಕೆರೆ ಒಡಲು ಬರಿದಾಗ ತೊಡಗಿತು. ಅಲ್ಲದೆ, ಕೊಳಚೆ ನೀರು ತುಂಬಿಕೊಂಡಿತು. ಒತ್ತುವರಿ ಸಮಸ್ಯೆಯೂ ಆರಂಭವಾಯಿತು. ಕೆರೆ ಅಂಗಳ ವಿವಿಧ ಸಮುದಾಯಗಳಿಗೆ ಸ್ಮಶಾನ ಕೇಂದ್ರವಾಯಿತು.