ತಾಲ್ಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ರಥಕ್ಕೆ ಬಾಳೆಹಣ್ಣು, ದವನ ಸಮರ್ಪಿಸಿ ಸ್ವಾಮಿಯ ದರ್ಶನ ಪಡೆದರು. ರಥೋತ್ಸವದ ಅಂಗವಾಗಿ ತಿರು ಕಲ್ಯಾಣೋತ್ಸವ, ಚತುಸ್ಥ್ಸಾನಾರ್ಚನೆ, ಪೂರ್ಣಾಹುತಿ, ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. ಮಾರ್ಚ್ 8ರಂದು ಪುಷ್ಪಯಾಗ, ದೇವತೋದ್ವಾಸನ ಕಾರ್ಯಕ್ರಮಗಳು ನಡೆಯಲಿವೆ.