ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಮುಖಂಡ ಬಿ.ಕೆ.ರಮೇಶ್, ‘ಬೊಮ್ಮವಾರ ಗ್ರಾಮಕ್ಕೆ ಹೊಂದಿಕೊಂಡಂತೆ ಸರ್ವೇ ನಂಬರ್ 36ರಲ್ಲಿ ನೂರಕ್ಕೂ ಹೆಚ್ಚು ಎಕರೆ ಸರ್ಕಾರಿ ಗೋಮಾಳದ ಜಾಗವನ್ನು ನೂರಾರು ವರ್ಷಗಳಿಂದ ಹಿರಿಯ ತಲೆಮಾರಿನವರು ಗ್ರಾಮದ ಸೊತ್ತಾಗಿ ಉಳಿಸಿಕೊಂಡು ಬಂದಿದ್ದಾರೆ. ಯಾರು ಉಳುಮೆಗೆ ಹೊದರೂ ಬಿಡುತ್ತಿರಲಿಲ್ಲ. ಕಳೆದ ಹತ್ತು ವರ್ಷಗಳ ಹಿಂದೆ ಗೋಮಾಳ ಒತ್ತುವರಿ ಹೊರತುಪಡಿಸಿ 86 ಎಕರೆ ಜಾಗವಿತ್ತು. ಈ ಪೈಕಿ ವಾಜಪೇಯಿ ವಸತಿ ಶಾಲೆಗೆ ಹತ್ತು ಎಕರೆ, ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ, ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಒಂದೊಂದೇ ಇಲಾಖೆ ಜಾಗ ನೀಡಲಾಗಿದೆ’ ಎಂದು ಹೇಳಿದರು.