ಬಿಜೆಪಿ ಮುಖಂಡ ಎಸ್.ಮುನಿರಾಜು, ಬಿಜೆಪಿ ಮಂಡಲ ಅಧ್ಯಕ್ಷ ಹನುಮಯ್ಯ, ಕೊಳ್ಳಿಗಾನಹಳ್ಳಿ ವೆಂಕಟೇಶ್, ಮಾದನಾಯಕನಹಳ್ಳಿ ನಗರಸಭೆ ಆಯುಕ್ತ ಹನುಮಂತೇಗೌಡ, ಸಂತೋಷ ಭಾರತಿ ಗುರೂಜಿ ಇದ್ದರು. ಸಾಲುಮರದ ತಿಮ್ಮಕ್ಕ, ಜಾನಪದ ಕಲಾವಿದ ಅಪ್ಪಗೆರೆ ತಿಮ್ಮರಾಜು, ಬಿ.ಆರ್.ಹಿರೇಮಠ್, ಸಾಹಿತಿ ವೈಬಿಎಚ್ ಜಯದೇವ್ ಹಾಗೂ ಇನ್ನೂ ಕೆಲ ಸಾಧಕರಿಗೆ ‘ಶ್ರೇಷ್ಠ ಕನ್ನಡಿಗ ಪುನೀತ್ ರಾಜ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.