ವಕೀಲರ ಸಂಘ ನಿಕಟಪೂರ್ವ ಅಧ್ಯಕ್ಷರಾದ ಬಿ.ಎಂ.ಭೈರೇಗೌಡ, ನಾರಾಯಣಸ್ವಾಮಿ ಮಾತನಾಡಿ, ಪೊಲೀಸರು ಹಲ್ಲೆ ಎಂಬುದು ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಪಶು ಪ್ರಾಣಿಗಳಂತೆ ಕೀಳು ಮಟ್ಟದಲ್ಲಿ ಕಾಣುತ್ತಾರೆ. ಬ್ರಿಟಿಷರು ದೇಶದಲ್ಲಿ ಆಡಳಿತ ನಡೆಸಿದ ಸಂದರ್ಭದಲ್ಲಿ ತೋರಿಸುತ್ತಿದ್ದ ದರ್ಪ, ದುರಂಹಕಾರದ ನಡೆಯನ್ನು ಬ್ರಿಟಿಷರು ಸ್ಥಳೀಯ ಪೊಲೀಸರಿಗೆ ಬಳುವಳಿಯಾಗಿ ನೀಡಿದಂತಿದೆ ಎಂದು ಆಕ್ಷೇಪಿಸಿದರು.