ಮೀಸಲಾತಿಯಿಂದ ಲಂಬಾಣಿ, ಕೊರಮ, ಕೊರಚ, ಭೋವಿ ಜನಾಂಗವನ್ನು ಹೊರಗಿಡಬೇಕು ಎಂಬುದು ನಮ್ಮ ಒತ್ತಾಯವಲ್ಲ. ಪರಿಶಿಷ್ಟ ಜಾತಿಯ ಜನಸಂಖ್ಯೆ ಆಧರಿಸಿ ಎ, ಬಿ, ಸಿ, ಡಿ ವರ್ಗೀಕರಣ ಮಾಡಿ ಮೀಸಲಾತಿ ಹಂಚಿಕೆಯಾಗಬೇಕು. ಬೇರೊಂದು ಸಮುದಾಯದ ಊಟದ ತಟ್ಟೆಯನ್ನು ಕಸಿಯುವುದು ನಮ್ಮ ಸಮುದಾಯದ ಉದ್ದೇಶವಲ್ಲ. ಅದಕ್ಕಾಗಿ ಹೋರಾಟ ನಡೆಸುತ್ತಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಪಾಲು ಕೇಳುತ್ತಿದ್ದೇವೆ ಎಂದರು.