‘ನಮ್ಮ ತಾಲ್ಲೂಕಿನಲ್ಲಿ ಬೆಳೆಯುವ ಎಲೆ ಸಾಕಾಗುವುದಿಲ್ಲ. ಹೀಗಾಗಿ ತುಮಕೂರು, ಹಿರಿಯೂರು, ದಾವಣಗೆರೆ, ಚನ್ನಗಿರಿ ಭಾಗದಿಂದ ಹೆಚ್ಚಿನ ಎಲೆ ಇಲ್ಲಿಗೆ ಬರುತ್ತವೆ. ಆದರೆ ಈ ಬಾರಿ ತುಮಕೂರು, ದಾವಣಗೆರೆ ಭಾಗದಲ್ಲೂ ಮಳೆ ಹೆಚ್ಚಾಗಿದ್ದರಿಂದ ಎಲೆ ಬಳ್ಳಿ, ಬೇರುಗಳು ಕೊಳೆತು ಹೋಗಿವೆ. ಈಗಷ್ಟೇ ಮತ್ತೆ ಬಳ್ಳಿಗಳು ಚಿಗುರೊಡೆಯುತ್ತಿವೆ. ಇನ್ನು ಒಂದು ತಿಂಗಳ ಕಾಲವಾದರು ವೀಳ್ಯದ ಎಲೆ ಬೆಲೆ ಹೀಗೆ ಇರಲಿದೆ’ ಎಂದರು.