ತಾಲ್ಲೂಕಿನ ಕೋಳೂರು ಸಮೀಪ ಅರಣ್ಯ ಇಲಾಖೆ ಬೆಳೆಸಿರುವ ಕಿರುಅರಣ್ಯದಲ್ಲಿ ಕಂಡು ಬರುತ್ತಿದ್ದ ಚಿರತೆ ನಾಲ್ಕು ದಿನಗಳ ಹಿಂದೆ ಹರೀಶ್ ಎಂಬುವವರ ತೋಟದ ಮನೆಗೆ ನುಗ್ಗಿ ನಾಯಿಯನ್ನು ಭಕ್ಷಿಸಿತ್ತು. ಶ್ರೀನಿವಾಸಪುರ, ಮರಳೇನಹಳ್ಳಿ, ಕಮಲೂರು, ಶಿರವಾರ, ಅಂತರಹಳ್ಳಿ, ಕೋಳೂರು ಗ್ರಾಮಗಳ ಸುಮಾರು ಮೂರು ಕಿ.ಮೀ.ವ್ಯಾಪ್ತಿಯ ಗ್ರಾಮಗಳ ಜನರು ಚಿರತೆಯಿಂದಾಗಿ ಆತಂಕದಲ್ಲಿ ದಿನ ಕಳೆಯುವಂತಾಗಿತ್ತು.