ಮಹಿಳಾ ಮೊರ್ಚಾ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ನಾಗವೇಣಿ ಮಾತನಾಡಿ, ‘ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ, ಅನಾಥ ಮಕ್ಕಳಿಗೆ ಮತ್ತು ತೀರ ಬಡ ಕುಟುಂಬದ 10 ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ನೋಂದಾಯಿಸುವುದಾಗಿದೆ. ಈ ಯೋಜನೆಯಡಿ ಮಕ್ಕಳಿಗೆ 12 ವರ್ಷದವರಿಗೆ ಉಚಿತ ಊಟ, ತಿಂಡಿ, ಶಿಕ್ಷಣ, ಬಟ್ಟೆಗಳನ್ನು ನೀಡಲಾಗುತ್ತದೆ. ಇದನ್ನು ಪ್ರತಿ ಪದಾಧಿಕಾರಿಗಳು ತಾಲ್ಲೂಕಿಗೆ ಕನಿಷ್ಠ 25ರಂತೆ ಜಿಲ್ಲೆಗೆ 100 ಮಕ್ಕಳನ್ನು ನೋಂದಾಯಿಸಲೇಬೇಕು. ಹುಟ್ಟಹಬ್ಬ ಆಚರಿಸುವ ಶ್ರೀಮಂತರ ಮನವೊಲಿಸಿ ದತ್ತು ರೀತಿಯಲ್ಲಿ ಸಹಾಯ ಮಾಡಲು ತಿಳಿಸಬೇಕು ಎಂದರು.