ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ಜಿ. ಸಿದ್ದರಾಜು ಮತ್ತು ಸಿಬ್ಬಂದಿ ಕಾಣೆಯಾದ ಮಹಿಳೆಯ ಹುಡುಕಾಟ ನಡೆಸಿದ ಸಂದರ್ಭದಲ್ಲಿ ಆರೋಪಿ ರಾಜೇಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಗ ಪತ್ನಿ ಲಕ್ಷ್ಮೀಯನ್ನು ಗ್ರಾಮ ಸಮೀಪದ ನೀಲಗಿರಿ ತೋಪಿನ ಜಮೀನಿನ ಬಳಿ ಕೊಲೆ ಮಾಡಿ ದೇಹ ಯಾರಿಗೂ ಸಿಗಬಾರದು ಎಂದು ಕತ್ತಿಯಿಂದ ಮೃತದೇಹವನ್ನು ತುಂಡರಿಸಿ ಗುಂಡಸಂದ್ರ ಗ್ರಾಮದ ಕೆರೆ ಅಂಗಳದ ಗುಂಡಿಯಲ್ಲಿ ಹೂತು ಹಾಕಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದ. ಸರ್ಕಾರಿ ಅಭಿಯೋಜಕ ರಂಗಸ್ವಾಮಿ ವಾದಿಸಿದ್ದರು.