‘ತುಮಕೂರಿನ 15 ಅಧಿಕಾರಿಗಳ ವಿರುದ್ಧ ದೂರು ನೀಡಿದ್ದ ಆರೋಪಿ, 15 ದಿನಗಳಿಗೊಮ್ಮೆ ಲೋಕಾಯುಕ್ತ ಕಚೇರಿಗೆ ಬಂದು ಹೋಗುತ್ತಿದ್ದ. ದೂರುಗಳು ರದ್ದಾಗಿದ್ದರಿಂದ ಕೋಪಗೊಂಡಿದ್ದ ಆತ, ಕಚೇರಿಯ ಹಲವು ಅಧಿಕಾರಿಗಳನ್ನು ನಿಂದಿಸಿದ್ದ. ಅದಕ್ಕೆ ಅವರು, ‘ಲೋಕಾಯುಕ್ತರ ಕಡೆ ಹೋಗಿ ವಿಚಾರಿಸಿ’ ಎಂದಿದ್ದರು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.