ಸಚಿವ ಆರ್. ಅಶೋಕ್ ನೀಡಿರುವ ಶಿಸ್ತು ಕ್ರಮ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯನ್ನು ತಾಲ್ಲೂಕಿನಲ್ಲಿ ಕಟ್ಟಿ ಬೆಳೆಸುವಾಗ ಬಚ್ಚೇಗೌಡರು ಬೇಕಾಗಿತ್ತು. ಈಗ ಹಣವಂತ ಸಿಕ್ಕ ತಕ್ಷಣ ನಮ್ಮನ್ನು ಕಡೆಗಣಿಸಲಾಗುತ್ತಿದೆ. ರಾಜ್ಯದಲ್ಲಿ ಪಕ್ಷಕ್ಕೆ ಶಕ್ತಿಯಿಲ್ಲದ ಕಡೆಗಳಲ್ಲಿ ಬದಲಿ ವ್ಯಕ್ತಿಗಳನ್ನು ತೆಗೆದುಕೊಳ್ಳಲಿ. ಅದನ್ನು ಬಿಟ್ಟು ಕಡಿಮೆ ಅಂತರದಿಂದ ಸೋತ ಮತ್ತು ಪಕ್ಷ ಪ್ರಬಲವಾಗಿರುವ ಕಡೆಗಳಲ್ಲಿ ಹೊರಗಿನಿಂದ ವ್ಯಕ್ತಿಗಳನ್ನು ತೆಗೆದುಕೊಂಡು ನಿಷ್ಠಾವಂತರನ್ನು ಕಡೆಗಣಿಸುವುದು ಸರಿಯಲ್ಲ’ ಎಂದರು.