ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಗುರಿಯಾಗಿಸಿ ಸಿದ್ದರಾಮಯ್ಯ ವ್ಯಂಗ್ಯಭರಿತ ಟ್ವೀಟ್ ಮಾಡಿದ್ದಾರೆ. ಜತೆಗೆ ವ್ಯಂಗ್ಯಚಿತ್ರವೊಂದನ್ನೂ ಲಗತ್ತಿಸಿದ್ದಾರೆ. ಕಳ್ಳರು ಪರಾರಿಯಾಗುತ್ತಿರುವಾಗ ಪ್ರಧಾನಿ ಮೋದಿ ನಿದ್ರಿಸುತ್ತಿರುವ ವ್ಯಂಗ್ಯಚಿತ್ರ ಇದಾಗಿದೆ. ‘ತುರ್ತು ಸಂದರ್ಭದಲ್ಲಿ ನೆಹರು ಅವರನ್ನು ಟೀಕಿಸಿ’ ಎಂಬ ಬರಹದ ಫಲಕವನ್ನೂ ಮೋದಿ ಚಿತ್ರದ ಬಳಿ ಇರಿಸಲಾಗಿರುವ ವ್ಯಂಗ್ಯಚಿತ್ರ ಇದಾಗಿದೆ.