ರೈತರಾದ ರಮೇಶ್, ರವಿಕುಮಾರ್, ಚಂದ್ರಶೇಖರ್ ಮಾತನಾಡಿ, ಪ್ರಸ್ತುತ ಗಣಿ ಆಳ 250 ಅಡಿಗಿಂತ ಕೆಳಗಿದೆ. ಗಣಿಯಲ್ಲಿ ಶೇಖರಣೆಯಾಗುವ ಅಂತರ್ಜಲವನ್ನು ಡೀಸೆಲ್ ಪಂಪ್ ಮೋಟರ್ ನಿಂದ ಹೊರಹಾಕಲಾಗುತ್ತದೆ. ಈ ಗಣಿಗಾರಿಕೆ ವ್ಯಾಪ್ತಿಯ 10 ಕಿ.ಮಿಸುತ್ತ ಯಾವುದೇ ಕೃಷಿ ಮತ್ತು ತೋಟಗಾರಿಕೆ ಬೆಳೆ ರೈತರಿಗೆ ಸಿಗುತ್ತಿಲ್ಲ. ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟದಲ್ಲಿಯೂ ಕಲ್ಲಿನ ದೂಳು ಬೀಳುತ್ತಿದೆ. ಪರಿಸರಕ್ಕೂ ಮಾರಕವಾಗಿದೆ. ಅಸಹಾಯಕತೆ ವ್ಯಕ್ತಪಡಿಸಿದರು.