ವರದಿಯೊಂದಿಗೆ ಸಲ್ಲಿಕೆಯಾಗಿರುವ ನಕ್ಷೆಯಲ್ಲಿ ರಾಜಕಾಲುವೆ ಹಳ್ಳ ಒತ್ತುವರಿ ಮಾಡಿರುವ ಕುರಿತು ಗುರುತು ಹಾಕಿರುವುದು
ನಕಾಶೆಯಲ್ಲಿದ್ದ ಹಳ್ಳ ಕಾಣೆ
ಕಂದಾಯ ದಾಖಲೆಗಳ ಪ್ರಕಾರ ಅಸ್ತಿತ್ವದಲ್ಲಿದ್ದ ಹಳ್ಳ ಈಗ ಕಾಣೆಯಾಗಿದೆ. ನಕ್ಷೆಯಲ್ಲಿ ಸ್ಪಷ್ಟವಾಗಿ ಗುರುತಿಸಲಾಗಿದ್ದ ಹಳ್ಳ ಈಗ ಕಾಣುತ್ತಿಲ್ಲ. ಅದರ ಭೌತಿಕ ಅಸ್ತಿತ್ವ ನಾಶವಾಗಿದೆ. ಗಣಿಗಾರಿಕೆಗೆ ಈ ಪ್ರದೇಶ ಮಂಜೂರಾದ ನಂತರ ಹಳ್ಳ ನಾಶವಾಗಿದೆ ಎಂದು ಗ್ರಾಮಲೆಕ್ಕಾಧಿಕಾರಿಯ ವರದಿ ಹೇಳುತ್ತದೆ. ನೀರಿನ ಮೂಲ ಕಾಪಾಡಬೇಕಾದ ಜಿಲ್ಲಾಡಳಿತ ಕಂದಾಯ ಇಲಾಖೆ ಮತ್ತು ಅಧಿಕಾರಿಗಳು ಮೌನ ವಹಿಸಿರುವುದಕ್ಕೆ ದೂರುದಾರ ಚಿರಂಜೀವಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.