ಹೊಸಕೋಟೆ: ಎಂಟಿಬಿ ನಾಗರಾಜ್ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ನಗರ ಸಭಾಧ್ಯಕ್ಷ ಅರುಣ್ ಕುಮಾರ್(ಹರಿ) ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಗ್ರಹಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ವಿನಾಕಾರಣ ವಿಳಂಬ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮಂತ್ರಿಸ್ಥಾನ ಸಿಗದಿದ್ದರೆ ತಾಲ್ಲೂಕಿನ ಎಲ್ಲ ಜನಪ್ರತಿನಿಧಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ಉಪಾಧ್ಯಕ್ಷೆ ಶೋಭ ಜುಂಜಪ್ಪ, ನಗರಸಭಾ ಸದಸ್ಯರಾದ ನವೀನ್ ಕುಮಾರ್, ನಿತಿನ್ ಶ್ರೀನಿವಾಸ್, ಬಿರಿಯಾನಿ ಆನಂದ್, ನಾಗರಾಜ್, ಟೌನ್ ಬ್ಯಾಂಕ್ ಸದಸ್ಯರಾದ ಜಿ.ಟಿ.ಮೋಹನ್, ಆಸಿಫ್ ಇದ್ದರು.