ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್, ಕೆ.ಪಿ.ಸಿ.ಸಿ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಮಾತನಾಡಿ, ಜಿಲ್ಲಾಡಳಿತ ಸಂಕೀರ್ಣ ನಿರ್ಮಾಣಕ್ಕೆ ಏಳು ಮಂದಿ ರೈತರು 8.10 ಎಕರೆ ಜಾಗ ನೀಡಿದ್ದಾರೆ. ಆದಕ್ಕೆ ಪರ್ಯಾಯವಾಗಿ ನೀಡಿರುವ ಭೂಮಿಯಲ್ಲಿ ಒಬ್ಬ ರೈತರ ಜಮೀನು ಸಮತಟ್ಟುನಿಂದ ಕೂಡಿದೆ. ಉಳಿದ ರೈತರಿಗೆ ನೀಡಿದ ಜಮೀನು ಕೊರಕಲು ಗುಂಡಿಗಳಿವೆ. ತ್ವರಿತವಾಗಿ ಅನುಕೂಲ ಕಲ್ಪಿಸಬೇಕೆಂದು ಸಚಿವರ ಗಮನಕ್ಕೆ ತಂದರು.