ನಂದಗುಡಿ ಹೋಬಳಿಯಲ್ಲಿ ಪ್ರಚಾರ ಭಾಷಣ ಮಾಡಿದ ಅವರು, ‘ಯಡಿಯೂರಪ್ಪನವರು ಹೇಳಿದಂತೆ ನಾನು ಗೆದ್ದ 24 ಘಂಟೆಯೊಳಗೆ ಮಂತ್ರಿಯಾಗಿ ಕೆಲಸಮಾಡುತ್ತೇನೆ. ಆದರೆ ಬೇರೆಯವರು ಗೆದ್ದರೆ ಕೇವಲ ಶಾಸಕರಷ್ಟೆ. ಅವರಿಂದ ಅಭಿವೃದ್ಧಿ ಕೆಲಸ ಸಾದ್ಯವಿಲ್ಲ. ಅವರಲ್ಲಿ ಯಾರೂ ತಾಲ್ಲೂಕಿನ ಯಾವುದೇ ಹಳ್ಳಿಗೆ ಒಂದು ಕೊಳವೆ ಬಾವಿಯನ್ನೂ ಹಾಕಿಸಿಲ್ಲ’ ಎಂದರು.