‘ಸಾಮಾನ್ಯವಾಗಿ ಉಪಚುನಾವಣೆ ಬರುವುದು ಶಾಸಕ ನಿಧನಹೊಂದಿದರೆ ಅಥವಾ ಅವನಿಗೆ ರಾಜಕೀಯ ಬೇಸರವಾಗಿ ಬಿಟ್ಟರೆ ಆದರೆ ಇಲ್ಲಿ ಎಂಟಿಬಿ ನಾಗರಾಜ್ ತಮ್ಮ ಕ್ಷೇತ್ರದ ಅಭಿವೃದ್ದಿಯಾಗಲಿಲ್ಲ. ಅದಕ್ಕಾಗಿ ರಾಜಿನಾಮೆ ಕೊಟ್ಟೆ ಎನ್ನುತ್ತಿದ್ದಾರೆ ಆದರೆ ಒಬ್ಬ ಮಂತ್ರಿಯಾಗಿ ತನ್ನ ಕ್ಷೇತ್ರದ ಕೆಲಸಗಳನ್ನು ಮಾಡಿಸಿಕೊಳ್ಳಲಾಗದವನು ರಾಜಕೀಯಕ್ಕೆ ಅಸಮರ್ಥ ಎಂದರು. ಚುನಾವಣೆಯ ಪಲಿತಾಂಶದ ಬಳಿಕ ರಾಜ್ಯದ ರಾಜಕೀಯ ಪರಿಸ್ಥಿತಿ ಬದಲಾಗುತ್ತದೆ ಶಾಸಕರನ್ನು ಖರೀದಿಸಿ ಅಧಿಕಾರ ಮಾಡುವ ಬಿಜೆಪಿಯ ದುರಾಡಳಿತ ಮುಗಿಯುತ್ತದೆ’ ಎಂದರು.ಶಾಸಕರಾದ ಶ್ರೀನಿವಾಸ್, ರಾಘವೇಂದ್ರ ಹಿಟ್ನಾಳ್, ಕಾಂಗ್ರೆಸ್ ನಗರ ಅಧ್ಯಕ್ಷ ಹೇಮಂತಕುಮಾರ್ ಇದ್ದರು.