ಹೊಸಕೋಟೆ: ‘ತಾಲ್ಲೂಕಿನಲ್ಲಿ 3 ಸಾವಿರ ಮತಗಳಿದ್ದ ಬಿಜೆಪಿಗೆ 98 ಸಾವಿರ ಮತ ಬರುವಂತೆ ಮಾಡಿ, ತಾಲ್ಲೂಕಿನಲ್ಲಿ ಕೇಸುಗಳನ್ನು ಹಾಕಿಸಿಕೊಂಡು, ನೋವನ್ನು ಅನುಭವಿಸಿದ ನಾವು ಪಕ್ಷ ಕಟ್ಟಿದೆವು. ಹುಳ ಕಟ್ಟಿದ ಹುತ್ತಕ್ಕೆ ಹಾವು ಬರುವಂತೆ ಪಕ್ಷಕ್ಕೆ ನಾಗರಹಾವಿನಂತೆ ಬಂದ ನಾಗರಾಜ್ ನಮಗೇ ಜಾಗವಿಲ್ಲದಂತೆ ಮಾಡಿದ್ದಾರೆ’ ಎಂದು ಸ್ವತಂತ್ರ ಅಭ್ಯರ್ಥಿ ಶರತ್ ಬಚ್ಚೇಗೌಡ ವ್ಯಂಗ್ಯವಾಡಿದರು.