ದೊಡ್ಡಬಳ್ಳಾಪುರ: ಆಷಾಢ ಮಾಸದ ಕೊನೆಯ ಸೋಮವಾರವಾದ ಇಂದು ನಡೆದ ನಂದಿ ಗಿರಿ ಪ್ರದಕ್ಷಿಣಗೆ ಹಂಪಿ ಗಾಯತ್ರಿ ಪೀಠ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ದಯಾನಂದಪುರಿ ಮಹಾಸ್ವಾಮೀಜಿ ಅವರು ಚಾಲನೆ ನೀಡಿದರು.
ಭೋಗ ನಂದೀಶ್ವರ ದೇವಾಲಯದಿಂದ ಆರಂಭವಾದ ಗಿರಿ ಪ್ರದಕ್ಷಣಯಲ್ಲಿ ಸಾವಿರಾರು ಜನ ಭಕ್ತರು ಬೆಳಿಗ್ಗೆ ಆರು ಗಂಟೆಯಿಂದಲೇ ದೇವರ ನಾಮ ಸ್ಮರಣೆಯೊಂದಿಗೆ ಪ್ರಕೃತಿ ರಮ್ಯತಾಣ ನಂದಿ ಪ್ರದಕ್ಷಣೆಯಲ್ಲಿ ಭಾಗವಹಿಸಿದ್ದರು.
ಶ್ರೀನಂದಿ ಗಿರಿ ಪ್ರದಕ್ಷಣಾ ಸೇವಾ ಟ್ರಸ್ಟ್ ಪ್ರತಿ ವರ್ಷವು ಗಿರಿ ಪ್ರದಕ್ಷಣೆ ಆಯೋಜಿಸುತ್ತದೆ. ನಂದಿ ಬೆಟ್ಟದ ಸುತ್ತಲು ಇರುವ ದಿಬ್ಬಗಿರಿ, ಬ್ರಹ್ಮಗಿರಿ, ಚೆನ್ನಗಿರಿ, ಸ್ಕಂದ ಗಿರಿ ಸೇರಿದಂತೆ ಪಂಚಗಿರಿಗಳನ್ನು ಭಕ್ತಿಯಿಂದ ಪ್ರದಕ್ಷಿಣೆ ಮಾಡಿದರೆ ಕೈಲಾಸ ಪರ್ವತವನ್ನೇ ಸುತ್ತಿದಂತೆ ಎನ್ನುವ ನಂಬಿಕೆ ಈ ಭಾಗದ ಜನರಲ್ಲಿದೆ.
ನಂದಿಗಿರಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಒ.ನಾಗಾರಾಜ್,ಮುಖಂಡರಾದ ಟಿ.ರಾಮಣ್ಣ,ಬಿ.ಮುನೇಗೌಡ, ಅಖಿಲೇಶ್, ಚಿಕ್ಕಣ್ಣ, ನಟರಾಜ್, ರಾಘವೇಂದ್ರ,ಶ್ರೀನಿವಾಸ್,ಮಧುಸೂಧನ್, ಕುಮಾರ್, ವೇಣು, ಪ್ರಭಾಕರ್, ಚಂದ್ರಶೇಖರ್ ಭಾಗವಹಿಸಿದ್ದರು.