ದೊಡ್ಡಬಳ್ಳಾಪುರ:ನಗರದ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಗಣಿತ ವಿಭಾಗದಿಂದ ಮಂಗಳವಾರ ದೇಶದ ಶ್ರೇಷ್ಠ ಗಣಿತಶಾಸ್ತ್ರಜ್ಞ ಡಾ.ಶ್ರೀನಿವಾಸರಾಮಾನುಜಂ ಅವರ 134ನೇ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಗಣಿತ ದಿನ ಆಚರಿಸಲಾಯಿತು.
ಜೂಮ್ ಆಪ್ ಮೂಲಕ ಶ್ರೀನಿವಾಸರಾಮಾನುಜಂ ಅವರ ಜೀವನ ಸಾಧನೆ ಕುರಿತ ‘ದ ಮ್ಯಾನ್ ಹೂ ನ್ಯೂ ಇನ್ಫಿನಿಟಿ’ ಚಲನಚಿತ್ರವನ್ನು ಪ್ರದರ್ಶಿಸಲಾಯಿತು. ಬಿಎಸ್ಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಆರ್. ರವಿಕಿರಣ್ ಮಾತನಾಡಿ, ರಾಮಾನುಜಂ ಅಸಾಧಾರಣ ಆಲೋಚನೆ, ಗಣಿತದಲ್ಲಿ ಹೊಂದಿದ್ದ ಪ್ರಯೋಗಶೀಲತೆ ಭಾರತೀಯರೆಲ್ಲರಿಗೂ ಹೆಮ್ಮೆ ತರುವಂತಹುದು ಎಂದರು.
ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಎಚ್.ಆರ್. ಭವ್ಯಾ, ಭೌತಶಾಸ್ತ್ರ ವಿಭಾಗದ ನಿಷತ್ ಸುಲ್ತಾನಾ, ಗಣಕ ವಿಜ್ಞಾನ ವಿಭಾಗದ ಗಿರೀಶ್ ಇದ್ದರು.