ದೇವನಹಳ್ಳಿ: ಹೊರವಲಯದ ಬೈಪಾಸ್ ರಸ್ತೆಯಲ್ಲಿರುವ ಪಾರಿವಾಳ ಗುಡ್ಡದ ಪಕ್ಕದ ಖಾಸಗಿ ಜಮೀನೊಂದರಲ್ಲಿ ಸಂಜೆ ವಿವಿಧ ಅಪಾರ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಬೆಂಕಿಗೆ ಆಹುತಿಯಾದ ವಸ್ತುಗಳ ಮಾಲೀಕ ಬೆಂಗಳೂರು ನಗರದ ಮುನಿರೆಡ್ಡಿಪಾಳ್ಯದಲ್ಲಿರುವ ಫನ್ ವಲ್ಡ್ ವೇಸ್ಟೇಜ್ ವಸ್ತುಗಳನ್ನು ಪಾರಿವಾಳ ಗುಡ್ಡಿದ ಬಳಿ ಇರುವ ದಾಸ್ತಾನು ಮಳಿಗೆಯಲ್ಲಿ ಸಂಗ್ರಹಿಸಿದ್ದರು. ಆದರೆ, ಮಾಲೀಕನ ಹೆಸರು ಈವರೆಗೂ ಪತ್ತೆಯಾಗಿಲ್ಲ.
ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ದಾಸ್ತಾನು ಮಾಡಲಾಗಿದ್ದ ಬೃಹದಾಕಾರದ ರಾಸಾಯನಿಕ ಸಂಗ್ರಹ ಡ್ರಮ್ಗಳು ಮತ್ತು ಇತರೆ ವಸ್ತುಗಳು ಭಸ್ಮವಾಗಿವೆ.
ಅಗ್ನಿಶಾಮಕ ಮತ್ತು ತುರ್ತುಸೇವಾ ಸಿಬ್ಬಂದಿ ಸತತ ನಾಲ್ಕು ತಾಸುಗಳವರೆಗೆ ಬೆಂಕಿ ನಂದಿಸಲು ಪ್ರಯತ್ನಪಟ್ಟರು. ಕೊನೆಗೆ ಬೆಂಕಿಹತೋಟಿಗೆ ಬಂದಿದೆ.