ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರಿವಾಳ ಗುಡ್ಡದ ಬಳಿ ಬೆಂಕಿ ಅನಾಹುತ

Last Updated 1 ಏಪ್ರಿಲ್ 2021, 7:28 IST
ಅಕ್ಷರ ಗಾತ್ರ

ದೇವನಹಳ್ಳಿ: ಹೊರವಲಯದ ಬೈಪಾಸ್ ರಸ್ತೆಯಲ್ಲಿರುವ ಪಾರಿವಾಳ ಗುಡ್ಡದ ಪಕ್ಕದ ಖಾಸಗಿ ಜಮೀನೊಂದರಲ್ಲಿ ಸಂಜೆ ವಿವಿಧ ಅಪಾರ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಬೆಂಕಿಗೆ ಆಹುತಿಯಾದ ವಸ್ತುಗಳ ಮಾಲೀಕ ಬೆಂಗಳೂರು ನಗರದ ಮುನಿರೆಡ್ಡಿಪಾಳ್ಯದಲ್ಲಿರುವ ಫನ್ ವಲ್ಡ್ ವೇಸ್ಟೇಜ್ ವಸ್ತುಗಳನ್ನು ಪಾರಿವಾಳ ಗುಡ್ಡಿದ ಬಳಿ ಇರುವ ದಾಸ್ತಾನು ಮಳಿಗೆಯಲ್ಲಿ ಸಂಗ್ರಹಿಸಿದ್ದರು. ಆದರೆ, ಮಾಲೀಕನ ಹೆಸರು ಈವರೆಗೂ ಪತ್ತೆಯಾಗಿಲ್ಲ.

ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ದಾಸ್ತಾನು ಮಾಡಲಾಗಿದ್ದ ಬೃಹದಾಕಾರದ ರಾಸಾಯನಿಕ ಸಂಗ್ರಹ ಡ್ರಮ್‌ಗಳು ಮತ್ತು ಇತರೆ ವಸ್ತುಗಳು ಭಸ್ಮವಾಗಿವೆ.

ಅಗ್ನಿಶಾಮಕ ಮತ್ತು ತುರ್ತುಸೇವಾ ಸಿಬ್ಬಂದಿ ಸತತ ನಾಲ್ಕು ತಾಸುಗಳವರೆಗೆ ಬೆಂಕಿ ನಂದಿಸಲು ಪ್ರಯತ್ನಪಟ್ಟರು. ಕೊನೆಗೆ ಬೆಂಕಿಹತೋಟಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT