ನೆಲಮಂಗಲ: ‘ಸಾಹಿತ್ಯ ಪರಿಷತ್ನ ಪ್ರತಿಯೊಬ್ಬ ಸದಸ್ಯರು ದಿನಕ್ಕೊಂದು ರೂಪಾಯಿಯಂತೆ ಒಂದು ವರ್ಷದ ಹಣವನ್ನು ಒಟ್ಟುಗೂಡಿಸಿದರೆ ಪ್ರತಿ ತಾಲ್ಲೂಕಿನಲ್ಲಿಯೂ ಕನ್ನಡ ಭವನವನ್ನು ಸ್ವತಂತ್ರವಾಗಿ ನಿರ್ಮಿಸಬಹುದು’ ಎಂದು ಬಸವಣ್ಣದೇವರ ಮಠದ ಸಿದ್ದಲಿಂಗ ಸ್ವಾಮಿಜಿ ಸಲಹೆ ನೀಡಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪರಿಷತ್ನ ಅಧ್ಯಕ್ಷ ಜಿ.ಉಮೇಶ್ಗೌಡ ನೂತನ ಅಧ್ಯಕ್ಷ ಕೇಶವಮೂರ್ತಿಗೆ ಕನ್ನಡ ಧ್ವಜ ಹಸ್ತಾಂತರಿಸಿದರು.