ಈ ನಡುವೆಯೇ ಸೌಮ್ಯ ಕುಟುಂಬದವರು ಸೆ. 1ರಂದು ಆಕೆಯನ್ನು ಬೆಂಗಳೂರಿನ ಕಲ್ಕರೆಯ ಯುವಕನೊಂದಿಗೆ ಧರ್ಮಸ್ಥಳದಲ್ಲಿ ಮದುವೆ ಮಾಡಿಕೊಟ್ಟಿದ್ದರು. ಗುರುವಾರ ತನ್ನ ಗಂಡನೊಂದಿಗೆ ತಂದೆ ಮನೆಗೆ ಆಕೆ ಬಂದಿದ್ದರು. ರಾತ್ರಿ ಸೌಮ್ಯ ಅವರ ಮನೆಗೆ ಬಂದಿದ್ದ ಆರೋಪಿಯು ಆಕೆಯೊಂದಿಗೆ ಸ್ವಲ್ಪ ಮಾತನಾಡಬೇಕು ಎಂದು ಬಚ್ಚಲು ಮನೆಗೆ ಕರೆದುಕೊಂಡು ಹೋಗಿ ಗಲಾಟೆ ಮಾಡಿದ್ದಾನೆ. ಬಳಿಕ ಚಾಕುವಿನಿಂದ ಆಕೆಯ ದೇಹದ ಹಲವೆಡೆ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.