‘ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಮೌಲ್ಯಗಳ ಕುಸಿತ ಉಂಟಾಗುತ್ತಿದೆ. ಹಾಗಾಗಿ ಧ್ಯಾನ, ಪ್ರಾರ್ಥನೆ, ಸತ್ಸಂಗಗಳು ಜನರಲ್ಲಿನ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಗಳು ಬೆಳೆಯುವಂತಹ ವಾತಾವರಣ ನಿರ್ಮಿಸಲು ದೇವಾಲಯಗಳು, ಆಶ್ರಮಗಳು ಪ್ರಮುಖ ತಾಣಗಳಾಗಿವೆ. ತಮ್ಮ ಹಿರಿಯರ ಆಶಯವನ್ನು ಈಡೇರಿಸಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಈ ದೇವಾಲಯದ ಸ್ಥಾಪಕರಾದ ಆರ್.ನಾಗೇಂದ್ರ ಅವರಲ್ಲಿ ಸಾರ್ಥಕತೆಯನ್ನು ಉಂಟು ಮಾಡಿದೆ. ಪ್ರತಿಯೊಬ್ಬರು ದಾನ, ಧರ್ಮಗಳಲ್ಲಿ ತೊಡಗಿಸಿಕೊಂಡಾಗ ಸಮಾಜದಲ್ಲಿ ಶಾಂತಿ, ನೆಮ್ಮದಿ ಉಂಟಾಗುತ್ತದೆ. ಹಾಗಾಗಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿಕೊಂಡು ಸನ್ಮಾರ್ಗದಲ್ಲಿ ನಡೆಯುವಂತಾಗಬೇಕು’ ಎಂದರು.