ಮುಖಂಡ ಎಂ.ಡಿ.ರಾಮಚಂದ್ರಪ್ಪ ಮಾತನಾಡಿ, ಸಮಾಜದಲ್ಲಿ ನಡೆಯುವಂತಹ ಇಂತಹ ಕ್ರೂರವಾದ ಕೃತ್ಯಗಳು ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು. ಈ ವ್ಯವಸ್ಥೆಯನ್ನು ಸರಿದಾರಿಗೆ ತರಲಿಕ್ಕಾಗಿ ಹೋರಾಟಗಳು ನಡೆಯಬೇಕಾಗಿರುವಂತಹ ಅನಿವಾರ್ಯತೆ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಕೆ.ಮುನಿರಾಜು, ವೆಂಕಟರಮಣಪ್ಪ, ಲೋಕೇಶ್ ಇದ್ದರು.