ಹೊಸಕೋಟೆ: ಕೊರೊನಾ ಸೋಂಕಿ ನಿಂದ ಗುಣಮುಖರಾಗಿ ಹೊರಬಂದ ಕೆಲವರಿಗೆ ಅನಿವಾರ್ಯವಾಗಿ ಕೆಲವು ದಿನಗಳ ಕಾಲ ಆಮ್ಲಜನಕ ಸಾಂದ್ರಕದ ಅವಶ್ಯಕತೆ ಇರುತ್ತದೆ. ವೈದ್ಯರು ಕೂಡ ಅವರಿಗೆ ಈ ಸಲಹೆ ನೀಡಿ ಮನೆಗೆ ಕಳುಹಿಸುತ್ತಾರೆ. ಆದರೆ, ಆರ್ಥಿಕ ಸಾಮರ್ಥ್ಯ ಇಲ್ಲದವರು ಸಾಂದ್ರಕ ತೆಗೆದುಕೊಳ್ಳಲು ಆಗುವುದಿಲ್ಲ. ಅಂತಹವರಿಗೆ ಭಾರತೀಯ ಜೈನ್ ಸಂಸ್ಥೆ ಸಹಾಯ ಮಾಡಲಿದೆ ಎಂದು ಸಂಸ್ಥೆಯ ಸದಸ್ಯ ದೀಪಕ್ ಜೈನ್ ತಿಳಿಸಿದರು.